ಜೈಲಲ್ಲಿ ಕುಲಕರ್ಣಿ ಬದುಕು ಬಿಂದಾಸ್

ಜೈಲಲ್ಲಿ ಕುಲಕರ್ಣಿ ಬದುಕು ಬಿಂದಾಸ್

ಬೆಳಗಾವಿ : ಧಾರವಾಡ ಜಿ.ಪಂ ಸದಸ್ಯ ಯೋಗೇಶ್ ಗೌಡಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆಯಂತೆ. ಕಂಬಿ ಹಿಂದೆ ಇದರೂ ಬಿಂದಾಸ್ ಆಗಿ ಕಾಲ ಕಳೆಯೋಕೆ ಅಧಿಕಾರಿಗಳೇ ಸಾಥ್ ನೀಡ್ತಿದ್ದಾರೆ ಅಂತ ಜೈಲಿನ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದ್ದು ಇದೀಗ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಚಿಕನ್ ಬಿರಿಯಾನಿ, ಧಾರವಾಢ ರೊಟ್ಟಿ, ಮೆತ್ತನೆಯ ಹಾಸಿಗೆ, ಬ್ರ‍್ಯಾಂಡೆAಡ್ ಡ್ರಿಂಕ್ಸ್…ಮೂಲಗಳ ಪ್ರಕಾರ ವಿನಯ್ ಕುಲಕರ್ಣಿಗೆ ಜೈಲಿನಲ್ಲಿ ಸಕಲ ಸವಲತ್ತುಗಳನ್ನೂ ಒದಗಿಸಲಾಗುತ್ತಿದೆಯಂತೆ. ಆಯಿಲ್ ಮಸಾಜ್ ಮಾಡೋಕೆ ಇಬ್ಬರು ಕೈದಿಗಳನ್ನ ಬಿಟ್ಟಿದ್ದಾರಂತೆ..

ಇಷ್ಟೇ ಅಲ್ಲದೇ ಪಾರ್ಸೆಲ್ ಜೊತೆಗೆ ಮೊಬೈಲ್ ಕೂಡ ವಿನಯ್ ಕುಲಕರ್ಣಿಯ ಕೈ ಸೇರುತ್ತೆ. ಜೈಲಿನ ಅಧಿಕಾರಿಗಳೇ ಮೊಬೈಲ್ ತಲುಪಿಸ್ತಿದ್ದಾರೆ ಅನ್ನೋ ವಿಷಯ ಗೊತ್ತಾಗಿದೆ. ಇದೆಲ್ಲವನ್ನೂ ನೋಡಿದರೆ ವಿನಯ್ ಕುಲಕರ್ಣಿಗೆ ಇರೋದು ಜೈಲಿನಲ್ಲೋ ಅಥವಾ ನೆಂಟರ ಮನೆಯಲ್ಲೋ ಅನ್ನೋ ಅನುಮಾನ ಮೂಡದೇ ಇರದು.

Related