ಕೃಷ್ಣಾರೆಡ್ಡಿ ರಾಜೀನಾಮೆ

ಕೃಷ್ಣಾರೆಡ್ಡಿ ರಾಜೀನಾಮೆ

ಬೆಂಗಳೂರು, ಮಾ. 17: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ ಎನ್ನುವಂತೆ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದಂತ ಕೃಷ್ಣಾರೆಡ್ಡಿಯವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದಕ್ಕ ಮುಖ್ಯ ಕಾರಣ, ಆಡಳಿತಾರೂಢ ಬಿಜೆಪಿ ಸರ್ಕಾರ ತಮ್ಮದೇ ಪಕ್ಷದ ವ್ಯಕ್ತಿಯೊಬ್ಬರನ್ನು ಈ ಸ್ಥಾನಕ್ಕೆ ನೇಮಕ ಮಾಡಲು ಮುಂದಾಗಿತ್ತು. ಇದೇ ಕಾರಣದಿಂದಾಗಿ ಉಪ ಸಭಾಧ್ಯಕ್ಷರಾಗಿದ್ದಂತ ಕೃಷ್ಣಾ ರೆಡ್ಡಿಯವರನ್ನು ಅವಿಶ್ವಾಸ ನಿರ್ಣಯದ ಮೂಲಕ ಕೆಳಗೆ ಇಳಿಸಿ, ಉತ್ತರ ಕರ್ನಾಟಕ ಮೂಲಕ ಶಾಸಕರೊಬ್ಬನ್ನು ಈ ಸ್ಥಾನಕ್ಕೆ ನೇಮಕ ಮಾಡಲು ಮುಂದಾಗಿತ್ತು.

ಈ ಹಿನ್ನಲೆಯಲ್ಲಿ ಬಿಜೆಪಿಯಿಂದ ಅವಿಶ್ವಾಸ ನಿರ್ಣಯ ಮಂಡಿಸಿ, ತಾವು ಕೆಳಗಿಳಿಯುವ ಮೊದಲೇ ವಿಧಾನಸಭೆಯ ಉಪಾಧ್ಯಕ್ಷರಾದಂತ ಜೆಡಿಎಸ್ ನ ಕೃಷ್ಣಾ ರೆಡ್ಡಿಯವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಉಪಾಧ್ಯಕ್ಷರ ಸ್ಥಾನದಿಂದ ಹೊರ ಬಂದಿದ್ದಾರೆ.

 

Related