ಕಾನ್ಪುರ: ಕುಖ್ಯಾತ ರೌಡಿ ವಿಕಾಸ್ ದುಪ್ತೆ ಆಪ್ತ ಅಮರ್ ದುಬೆಯನ್ನು ಹತ್ಯೆ ಮಾಡಿದ ಬೆನ್ನಲ್ಲೇ ಮತ್ತೊಬ್ಬ ಆಪ್ತ ಶ್ಯಾಮು ಬಜ್ಪಾಯಿ ಅವರನ್ನು ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಶುಕ್ರವಾರ ಉತ್ತರಪ್ರದೇಶದ ಕಾನ್ಪರದಲ್ಲಿ 8 ಮಂದಿ ಪೊಲೀಸರನ್ನು ವಿಕಾಸ್ ದುಬೆ ಹಾಗೂ ಆತನ ಆಪ್ತರು ಸೇರಿಕೊಂಡು ಹತ್ಯೆಗೈದಿದ್ದರು.
ಇದರ ಪ್ರತಿಕಾರವಾಗಿ ಉತ್ತರಪ್ರದೇಶದ ಹರ್ಮಿಪುರದಲ್ಲಿ ಎಸ್ಟಿಎಫ್ ಪಡೆ ಎನ್ಕೌಂಟರ್ ನಡೆಸಿದ್ದು, ಅಮರ್ ದುಬೆಯನ್ನು ಕೊಂದು ಹಾಕಿದ್ದಾರೆ ಎಂದು ಗೊತ್ತಾಗಿದೆ. ಬುಧವಾರ ಬಂಧಿಸಿದ ಶ್ಯಾಮು ಬಜ್ಪಾಯಿ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಉತ್ತರಪ್ರದೇಶದ ಪಾತಕಿ ವಿಕಾಸ್ ದುಬೆ ಅವಿತಿದ್ದ ದಿಕ್ರು ಗ್ರಾಮಕ್ಕೆ ತೆರಳಿದಾಗ ಆತನ ಸಹಚರರು ಗುಂಡಿನ ಮಳೆಗರೆದಿದ್ದಾರೆ. ಈ ವೇಳೆ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲಿಸ್ ಸಬ್ಇನ್ಸ್ಪೆಕ್ಟರ್ಸ್, ನಾಲ್ವರು ಪೇದೆಗಳು ಮೃತಪಟ್ಟಿದ್ದರು.