ಮಂಡ್ಯ,ನ.2: ಮುಂದಿನ ಲೋಕ ಸಮರದಲ್ಲಿ ಶತಾಯಗತಾಯ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ಮುಂದಿನ ಅತಿ ದೊಡ್ಡ ಗುರಿಯಾಗಿದೆ.
ಜೆಡಿಎಸ್ ಮೈತ್ರಿಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನೋವು ತರಿಸಿದೆ ಎಂಬ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಮಾಜಿ ಜೆಡಿಎಸ್ ಶಾಸಕ ಅನ್ನದಾನಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, 2006ರಲ್ಲಿ ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆ ಮಾಡಿದವರ್ಯಾರು? ಎಂದು ಪ್ರಶ್ನೆ ಮಾಡಿದರು.
ಅಂದು ಬಿಜೆಪಿ ಜತೆಗೆ ಸರ್ಕಾರ ರಚಿಸುವುದಕ್ಕೆ ದೇವೇಗೌಡ್ರು ವಿರೋಧ ಮಾಡಿದ್ದರು. ಅಂದಿನ ಸರ್ಕಾರದಲ್ಲಿ ಚಲುವರಾಯಸ್ವಾಮಿ ಮಂತ್ರಿಯಾಗಿದ್ದರು. ಬಿಜೆಪಿ ಜೊತೆಗೆ ಹೋದರೆ ದೇವೇಗೌಡರಿಗೆ ನೋವಾಗುತ್ತೆ ಅಂತ ಆ ದಿನ ಯಾಕೆ ಹೇಳಲಿಲ್ಲ? ಅಂದು ಬಿಜೆಪಿ ಜೊತೆಗೆ ಹೋಗೋದಕ್ಕೆ ಕಾರಣ ಯಾರೆಂದು ಚಲುವರಾಯಸ್ವಾಮಿ ಹೇಳಲಿ ಎಂದು ಸವಾಲು ಹಾಕಿದರು.
ಇದೆ ವೇಳೆ ಜೆಡಿಎಸ್ ಪಕ್ಷ ಧೂಳಿನಿಂದ ಎದ್ದು ಬರುತ್ತದೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ತೋರಿಸುತ್ತೇವೆ ಎಂದು ಹೇಳಿದರು.