ರೈತರ ಬೇಡಿಕೆಗೆ ಆಗ್ರಹಿಸಿ ಸಿ.ಪಿ.ಐ ಪಕ್ಷದಿಂದ ಜಾಥ

ರೈತರ ಬೇಡಿಕೆಗೆ ಆಗ್ರಹಿಸಿ ಸಿ.ಪಿ.ಐ ಪಕ್ಷದಿಂದ ಜಾಥ

ಜೇವರ್ಗಿ: ರೈತರಿಗೆ ಸರ್ಕಾರ ಉತ್ತಮವಾದ ನೀತಿಗಳನ್ನು ರೂಪಿಸುತ್ತಿಲ್ಲ, ರೈತರ ಹೆಸರಿನಲ್ಲಿ ಕಾನೂನುಗಳನ್ನು ರೂಪಿಸಿ ಮೋಸ ಮಾಡುತ್ತಿದ್ದಾರೆ, ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ, ಖಾಸಗಿ ಕಂಪನಿಗಳ ದಲ್ಲಾಳಿಗಳಂತೆ ಸರ್ಕಾರಗಳು ವರ್ತನೆ ಮಾಡುತ್ತೀದೆ, ಜನರನ್ನು ಜನಪ್ರತಿನಿಧಿಗಳು ಗುಲಾಮರಂತೆ ಕಾಣುತ್ತಿದ್ದಾರೆ. ಭಾರತ್ ಕಮುನಿಷ್ಠ ಪಕ್ಷ (ಸಿಪಿಐ) ಅಖಿಲ ಭಾರತ ಕಿಸಾನ್ ಸಭಾ (ಎ.ಅಯ್.ಕೆ.ಎಸ್.) ಜಂಟಿಯಾಗಿ ಯಡ್ರಾಮಿ ತಾಲ್ಲೂಕು ಮಟ್ಟದ ಜಾಥಾ ಹಮ್ಮಿಕೊಳ್ಳಲಾಗಿದೆ.
ಅರಳಗುಂಡಗಿ ವ್ಯಾಪ್ತಿಯಲ್ಲಿನ 15 ಗ್ರಾಮಗಳಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಪಟ್ಟಿ ಮಾಡಿ ಸೆ.15 ತಾಲ್ಲೂಕು ಕೇಂದ್ರವಾದ ಯಡ್ರಾಮಿಯ ಹಕ್ಕೊತ್ತಾಯದಲ್ಲಿ ಸಮಾವೇಶ ಆಯೋಜಿಸಲಾಗಿದೆ.ಅರಳಗುಂಡಗಿ ಮುರ್ಗನೂರ್, ತೆಲಗಬಾಳ, ಹಾಲ ಘತ್ತರಗಿ, ಕೋಣಸಿರಿಸಗೆ, ಕುಕುನೂರು ಅಕಂಡಹಳ್ಳಿ, ಶಕಪುರ, ಮಾನಶಿವನಗಿ, ಕಡಕೋಳ, ಯತ್ನಾಳ ಹಂಚಿನಾಳ, ಗ್ರಾಮಸ್ಥರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದರು.
ಹಕ್ಕೊತ್ತಾಯ ಜಾಥಾದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ, ಕಿಸಾನ್ ಸಭಾದ ಜಿಲ್ಲಾ ಮುಖಂಡ ಮೌಲಾ ಮುಲ್ಲಾ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡ್ಯಾಳ, ಮಹೇಶ್ ಕುಮಾರ್ ರಾಠೊಡ್, ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕ ಕಾರ್ಯದರ್ಶಿ ಮಲ್ಲಿಕಾರ್ಜುನ ದೊಡ್ಡಮನಿ, ಯಡ್ರಾಮಿ ತಾಲ್ಲೂಕು ಪಕ್ಷದ ಕಾರ್ಯದರ್ಶಿ ಭೀಮರಾಯ ಮುದಬಸ್ಸಪ್ಪ ಗೋಳ, ಅರಳಗುಂಡಿಗೆಯ ಶಂಕರಪ್ಪ, ಆನೂರ್, ಸುಭಾμï ದೊತಪ್ಪಗೋಳ, ಸಾಹೇಬಗೌಡ ಮುರುಡಿ, ಮುರ್ಗನೂರ್ ಗ್ರಾಮದ ಸಿದ್ದಣ್ಣ ಹೊಸಮನಿ, ಭೀಮರಾಯ ನೆಲೋಗಿ, ಹಂಚಿನಾಳ ಗ್ರಾಮದ ರೈತ ಮುಖಂಡರಾದ, ಗೋಪಾಲ ಅಂಚಿನಾಳ್, ಮಲ್ಲಿಕಾರ್ಜುನ್, ಕೋನ ಸಿರಸಗಿಯ, ಭಗವಂತರಾಯ ಬಿರಾದಾರ್, ಬಸವರಾಜ ಕೆರೂರ್, ರಾಮನಾಥ್ ಬಂಡಾರಿ, ರಮೇಶ್ ಜಾಧವ್, ಸುನಿಲ್ ಕಾಂಬ್ಳೆ ಇನ್ನಿತರರು ಜಾಥಾದಲ್ಲಿ ಭಾಗವಹಿಸಿದ್ದರು.

Related