ಜಗಜೀವನ್ ರಾಮ್ ಸಮುದಾಯ ಕೆಲಸಕ್ಕೆ ಬಾರದ ಸ್ಥಿತಿ

ಜಗಜೀವನ್ ರಾಮ್ ಸಮುದಾಯ ಕೆಲಸಕ್ಕೆ ಬಾರದ ಸ್ಥಿತಿ

ಚಿಂಚೋಳಿ: ತಾಲೂಕಿನ ಕನಕಪುರ ಗ್ರಾಮದ ಬಾಬು ಜಗಜೀವನ್ ರಾಮ್ ಸಮುದಾಯ ಭವನ ನಿರುಪಯುಕ್ತವಾಗಿದೆ ಮತ್ತು ಗೋಡೆಗಳು ಸಂಪೂರ್ಣವಾಗಿ ಬಿದ್ದು ಉಪಯೋಗಿಸಲು ಬಾರದೆ ಇರುವಂತಹ ಸ್ಥಿತಿಗೆ ತಲುಪಿದೆ ಮತ್ತು ಸಮುದಾಯದ ಜನರಿಗೆ ಯಾವುದೇ ಸಭೆ ಸಮಾರಂಭ ಮಾಡಲು ಸ್ಥಳಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧ ಪಟ್ಟ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಚಿಂಚೋಳಿ ಶಾಸಕರು ಇದರ ಬಗ್ಗೆ ಶೀಘ್ರದಲ್ಲಿ ಮುತುರ್ವಜಿ ವಹಿಸಿ ಬಾಬು ಜಗಜೀವನ ರಾಮ್ ಭವನ ಮಂಜೂರು ಮಾಡಿಸುವ ಮೂಲಕ ಕನಕಪುರ ಗ್ರಾಮದ ಸಮುದಾಯದ ಜನರ ಕಣ್ಣೋರೆಸುವ ಕೆಲಸ ಮಾಡಬೇಕು. ಎಂದು ದಲಿತಸೇನೆಯ ತಾಲೂಕ ಕಾರ್ಯ ಅಧ್ಯಕ್ಷ ಶ್ರೀಧರ್‍ವಗ್ಗಿ ಆಗ್ರಹಿಸಿದ್ದಾರೆ.

Related