ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸ್ ಅಧಿಕಾರಿಗಳು

ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸ್ ಅಧಿಕಾರಿಗಳು

ಜೇವರ್ಗಿ: ದಿನಾಂಕ 3/12/2020 ರಂದು ಶ್ರೀಮತಿ ಕಸ್ತೂರಿಬಾಯಿ ಗಂಡ ಶ್ರೀಮಂತ ಸಂಬಡ್ ಮಂದೇವಾಲ ಹೊಟೇಲ್ ಕೆಲಸ ಲಿಂಗಾಯತ ಇವರು ನೆಲೋಗಿ ಠಾಣೆಯಲ್ಲಿ ದೂರು ನೀಡಿದ್ದು, ಕಳ್ಳರು ಮನೆಗೆ ನುಗ್ಗಿ ಮನೆಯ ಕೀಲಿ ಮನೆಯಲ್ಲಿ ಹೋಗಿ ತಿಜೋರಿಯಲ್ಲಿ ಇಟ್ಟಿರುವ ಅರ್ಧ ಕೆ.ಜಿ ಬಂಗಾರ, 2 ಲಕ್ಷ ರೂಪಾಯಿ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ನೆಲೋಗಿ 152/2020 ಕಲಂ 457/380 ಐಪಿಸಿ ಅಡಿಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಆರೋಪಿ ಮತ್ತು ಕಳ್ಳತನ ಮಾಡಿದ ಮಾಲಿನ ಪತ್ತೆ ಕುರಿತು ಮಾನ್ಯ ಶ್ರೀಮತಿ ಸಿಮಿ ಮರಿಯ0 ಜಾರ್ಜ್ ಪೊಲೀಸ್ ಅಧೀಕ್ಷಕರು ಕಲ್ಬುರ್ಗಿ ಹಾಗೂ ಮಾನ್ಯ ಶ್ರೀ ಪ್ರಸನ್ನ ದೇಸಾಯಿ ಪೊಲೀಸ್ ಅಧೀಕ್ಷಕರು ಕಲ್ಬುರ್ಗಿ ಹಾಗೂ ಮಾನ್ಯ ಶ್ರೀ ಟಿ.ಜಿ. ದೊಡ್ಡಮನಿ ಡಿ.ಎಸ್ಪಿ ಗ್ರಾಮೀಣ ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀ ಎಂ ಶಿವಪ್ರಸಾದ್ ಸಿಪಿಐ ಜೇವರ್ಗಿ ರವರ ನೇತೃತ್ವದಲ್ಲಿ ನೆಲೋಗಿ ಪೊಲೀಸ್ ಠಾಣೆಯ ಪಿಎಸ್‍ಐ ರಾಜಕುಮಾರ್ ರಾಮಗೊಂಡ ಬಸವರಾಜ್ ಪಿಎಸ್‍ಐ ತನಿಕೆ ಬಸವರಾಜ್ ಚಿತಕೋಟಿ ಪಿಎಸ್‍ಐ ಯಡ್ರಾಮಿ ಮತ್ತು ಶ್ರೀಮತಿ ಜ್ಯೋತಿ ಪಿಎಸ್‍ಐ ತನಿಖೆ ಯಡ್ರಾಮಿ ಸಂಗಮೇಶ್ ಅಂಗಡಿ ಪಿಎಸ್‍ಐ ಜೇವರ್ಗಿ ಠಾಣೆ ಸಿದ್ದರಾಮಪ್ಪ ಪಿಎಸ್‍ಐ ತನಿಕೆ ಗುರುಬಸಪ್ಪ ಎಎಸ್‍ಐ ಮಲ್ಲಣ್ಣ ಎಎಸ್‍ಐ ಲಾಲಪ್ಪ ಎಚ್. ಎಸ್.ಸಿ ಸೋಮಶೇಖರ ಎಚ್.ಎಸ್.ಸಿ ಪರಮೇಶ್ವರ ಎಚ್.ಎಸ್.ಸಿ ಚಂದ್ರಾಮ ಎಚ್.ಎಸ್.ಸಿ ರಾಜಕುಮಾರ್ ಪಿ.ಸಿ ಅವ್ವಣ್ಣ ಎ.ಪಿ.ಸಿ ಶಿವರಾಜ್ ಪಿ.ಸಿ ಭಾಗಣ್ಣ ಪಿ.ಸಿ ರವರು ಆರೋಪಿತನ ಪತ್ತೆಗಾಗಿ ಜಾಲ ಬಿಸಿ ದಿನಾಂಕ 8/9/2021ರಂದು ಸಿಂದಗಿ ಬಸ್ ನಿಲ್ದಾಣದಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಆರೋಪಿಗೆ ವಿಚಾರಣೆಗೊಳಪಡಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

Related