ದಾವಣಗೆರೆ : ಈಶ್ವರಪ್ಪಗೆ ಟಾಂಗ್ ನೀಡಿರುವ ಸಿದ್ದರಾಮಯ್ಯ ಗೊಂಡ, ರಾಜಗೊಂಡ, ಗೊಲ್ಲ ಸಮುದಾಯಕ್ಕೆ ಶಿಫಾರಸು ಮಾಡಿದ್ದೆ. ಎಸ್ಟಿಗೆ ಶಿಫಾರಸು ಮಾಡಿದ್ದು ನಾನು ಅಂತ ಅವರಿಗೆ ಗೊತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.
ಕುರುಬ ಸಮುದಾಯಕ್ಕೆ ಎಸ್.ಟಿ ವಿಚಾರವಾಗಿ ಸಚಿವ ಕೆ.ಎಸ್. ಈಶ್ವರಪ್ಪಗೆ ಸವಾಲ್ ಹಾಕಿರುವ ಮಾಜಿ ಸಿ.ಎಂ ಸಿದ್ದರಾಮಯ್ಯ, ಈಶ್ವರಪ್ಪಗೆ ಧಮ್ ಇದ್ರೆ ಮುಂದಿನ ಸಿಎಂ ಅಂತ ಹೇಳಲಿ ಎಂದಿದ್ದಾರೆ.
ಸಿದ್ದರಾಮಯ್ಯ ಪರ ಇದೆ ಅಂತ ನನ್ನನ್ನ ಮುಗಿಸಲು ಮೀಸಲಾತಿ ಹೆಸರಲ್ಲಿ ಆರ್ಎಸ್ಎಸ್ ಈಶ್ವರಪ್ಪ ಅವರನ್ನ ಮುಂದೆ ಬಿಟ್ಟಿದೆ. ನಾನು ಎಸ್.ಟಿ ಮೀಸಲಾತಿ ವಿರೋಧಿಯಲ್ಲ. ಕೇಂದ್ರದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಮೀಸಲಾತಿ ಪಡೆಯಬಹುದಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದರು.