ಒಂದೇ ವಾರದಲ್ಲಿ 3 ಬಾರಿ ಖಾತೆ ಬದಲು

ಒಂದೇ ವಾರದಲ್ಲಿ 3 ಬಾರಿ ಖಾತೆ ಬದಲು

ಬೆಂಗಳೂರು: ಸಚಿವ ಡಾ.ಕೆ.ಸುಧಾಕರ್ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಜೊತೆಗೆ ವೈದ್ಯಕೀಯ ಖಾತೆಯನ್ನು ಮತ್ತೆ ಅವರಿಗೇ ನೀಡಿದ್ದಾರೆ.

ಕಳೆದ ವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ವೇಳೆ ವೈಜ್ಞಾನಿಕ ಶಿಕ್ಷಣ ಖಾತೆಯನ್ನು ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು ಜೆ.ಸಿ.ಮಾಧುಸ್ವಾಮಿ ಅವರಿಗೆ ನೀಡಲಾಗಿತ್ತು. ಈ ಬೆಳವಣಿಗೆಯಿಂದ ಸುಧಾಕರ್ ಮುನಿಸಿಕೊಂಡು ಸಚಿವ ಸಂಪುಟಕ್ಕೆ ಗೈರು ಹಾಜರಾಗಿದ್ದಲ್ಲದೆ ಕೆಲವು ಸಚಿವರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದರು.

ರಾಜ್ಯದಲ್ಲಿ ಕೊರೋನಾ ನಿರ್ವಹಣೆ ಮಾಡಬೇಕಾದ ಅಗತ್ಯವಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಒಬ್ಬರಿಗೇ ನೀಡಬೇಕೆಂದು ಮನವಿ ಮಾಡಿದ್ದರು.
ಜತೆಗೆ ಸಣ್ಣ ನೀರಾವರಿ ಖಾತೆಯನ್ನು ಹಿಂಪಡೆದು ವೈದ್ಯಕೀಯ ಖಾತೆ ನೀಡಿದ್ದಕ್ಕೆ ಮಾಧುಸ್ವಾಮಿ ಕೂಡ ಕೋಪಗೊಂಡಿದ್ದರು. ಇದೀಗ ಅವರಿಗೆ ಆನಂದ್ ಸಿಂಗ್ ಬಳಿ ಇದ್ದ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದ್ದು, ವೈದ್ಯಕೀಯ ಖಾತೆಯನ್ನು ಸುಧಾಕರ್‌ಗೆ ನೀಡಲಾಗಿದೆ.

ಆನಂದ್ ಸಿಂಗ್ ಅವರ ಬಳಿ ಇದ್ದ ಪ್ರವಾಸೋದ್ಯಮವನ್ನು ಹಿಂಪಡೆಲಾಗಿದ್ದು, ಅವರಿಗೆ ಸದ್ಯ ಪರಿಸರ ಖಾತೆಗೆ ಸೀಮಿತಗೊಳಿಸಲಾಗಿದೆ.
ಸಚಿವರಿಗೆ ನೀಡಲಾಗಿದ್ದ ಖಾತೆಗಳನ್ನು ಒಂದೇ ವಾರದಲ್ಲೆ ಮೂರು ಬಾರಿ ಬದಲಾಯಿಸಿರುವುದು ಇದೇ ಮೊದಲು.

Related