ಶಿವಕುಮಾರ ಸ್ವಾಮೀಜಿ ನಾಡಿಗೆ ಸ್ಫೂರ್ತಿ : ಡಿಸಿಎಂ

ಶಿವಕುಮಾರ ಸ್ವಾಮೀಜಿ ನಾಡಿಗೆ ಸ್ಫೂರ್ತಿ : ಡಿಸಿಎಂ

ತುಮಕೂರು : ಶಿವಕುಮಾರ ಸ್ವಾಮೀಜಿ ಅವರ ಎರಡನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭಾಗವಹಿಸಿದ್ದಾರೆ.

11ಕ್ಕೆ ಕಾರ್ಯಕ್ರಮ ನಿಗದಿ ಆಗಿತ್ತು. 10. 30ಕ್ಕೆ ಮಠಕ್ಕೆ ಬಂದ ಅವರು, ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದು ನೇರವಾಗಿ ವೇದಿಕೆಗೆ ಬಂದರು.

ಈ ಸಂದರ್ಭದಲ್ಲಿ  ಸಿದ್ಧಲಿಂಗ  ಸ್ವಾಮೀಜಿ, ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಉಪಮುಖ್ಯಮಂತ್ರಿ ಸಿ.ಎನ್ ಅಶ್ವತ್ಥನಾರಾಯಣ, ಕೇಂದ್ರ  ಸಚಿವ ಪ್ರತಾಪ ಚಂದ್ರ ಸಾರಂಗಿ, ಸಂಸದ ಜಿ.ಎಸ್ ಬಸವರಾಜು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್ ಪರಮಶಿವಯ್ಯ ಇದ್ದಾರೆ.

ಎಲ್ಲ ಸಮುದಾಯಗಳ ಬಡಮಕ್ಕಳಿಗೆ ಶಿಕ್ಷಣವನ್ನು ಶಿವಕುಮಾರ ಸ್ವಾಮೀಜಿ ನೀಡಿದರು. ಅವರು ಎಂದಿಗೂ ನಾಡಿಗೆ ಸ್ಫೂರ್ತಿ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದರು.

Related