ಜಂಟಿ ಆಯುಕ್ತರ ನೇತೃತ್ವದಲ್ಲಿ ಕಾಮಗಾರಿ ಪರಿಶೀಲನೆ

ಜಂಟಿ ಆಯುಕ್ತರ ನೇತೃತ್ವದಲ್ಲಿ ಕಾಮಗಾರಿ ಪರಿಶೀಲನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೊಮ್ಮನಹಳ್ಳಿ ವಲಯದಲ್ಲಿಂದು ಬೆಳ್ಳಂ ಬೆಳಗ್ಗೆ ಜಂಟಿ ಆಯುಕ್ತರಾದ ಅಜಿತ್ ಅವರ ನೇತೃತ್ವದಲ್ಲಿ ಹಲವಾರು ಕಾಮಗಾರಿಗಳನ್ನು ಪರಿಶೀಲನೆ ಮಾಡಲಾಯಿತು. ಮುಖ್ಯವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೃಹತ್ ರಾಜಕಾಲುವೆ ನಿರ್ಮಾಣ ಹಾಗೂ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಮುಖ್ಯವಾಗಿ ಮಳೆ ಸಂದರ್ಭದಲ್ಲಿ ಯಾವುದೇ ರೀತಿ ಎಚ್ಎಸ್ಆರ್ ಬಡಾವಣೆಯ ವಿಭಾಗದಲ್ಲಿ ಹಾಗೂ ಇನ್ನಿತರ ಭಾಗಗಳಲ್ಲಿ ಸಮಸ್ಯೆ ಆಗಬಾರದೆಂದು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ  ಸೂಚನೆ ನೀಡಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.

ಕಸ ವಿಂಗಡಣೆ ಹಾಗೂ ಅದೇ ರೀತಿ ವಿವಿಧ ಅಧಿಕಾರಿಗಳ ವೃಂದದೊಂದಿಗೆ ಬೆಸ್ಕಾಂ, ಬಿ. ಡಬ್ಲ್ಯು.ಎಸ್. ಎಸ್.ಬಿ. ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಗಳ ಬಗ್ಗೆ ಮಾತನಾಡಿದರು. ಇದೇ ವೇಳೆ ಹಲವಾರು ವರ್ಷಗಳಿಂದ ಎಚ್ಎಸ್ಆರ್ ಬಡಾವಣೆಯಲ್ಲಿ ಕಸ ವಿಂಗಡಣಾ ಕಲಿಕೆ ಕೇಂದ್ರಕ್ಕೆ ಭೇಟಿ ಮಾಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಪಾಲಕ ಪಾಪಯ್ಯ ರೆಡ್ಡಿ,ಬಿ. ಡಬ್ಲ್ಯು.ಎಸ್. ಎಸ್ .ಬಿ. ಕಾರ್ಯಪಾಲಕ ಅಭಿಯಂತರಾದ ನಾಗೇಂದ್ರ, ಸಹಾಯಕ ಇಂಜಿನಿಯರ್ ಗಳಾದ ರಾಮೇಗೌಡ, ಬೆಸ್ಕಾಂನ ಎ ಡಬ್ಲ್ಯೂ ರಾಜಶೇಖರ ಗೌಡ, ಮತ್ತು ಇನ್ನಿತರ ವಿಭಾಗದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related