ಕಾರ್ಖಾನೆಗೆ ಮತ್ತೆ ಅರಳಿದ ನಗೆ

ಕಾರ್ಖಾನೆಗೆ ಮತ್ತೆ ಅರಳಿದ ನಗೆ

ಮುಧೋಳ : ಒಂದು ಕಾರ್ಖಾನೆ ಬಾಗಿಲು ಮುಚ್ಚಿದರೆ ಸಾವಿರಾರು ಕುಟುಂಬಗಳು ಬೀದಿಪಾಲಾಗುತ್ತವೆ. ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರಿ ಕಾರ್ಖಾನೆ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದೆ.

ಕಾರ್ಮಿಕರು ಸಂಬಳವಿಲ್ಲದೆ ಅನುಭವಿಸಿದ ಕಷ್ಟ ಅಷ್ಟಿಷ್ಟಲ ರೈತರ ಕಬ್ಬಿನ ಮಾರಾಟವಿಲ್ಲದೇ ತೀವ್ರ ಆತಂಕ ಅನುಭವಿಸಿದರು, ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ನಡೆಸುವ ಹೊಣೆಗಾರಿಕೆ ಮುಧೋಳದ ನಿರಾಣಿ ಉದ್ಯಮ ಸಮೂಹಕ್ಕೆ ರ‍್ಕಾರ ಒಪ್ಪಿಸಿದೆ.

ಒಂದೇ ತಿಂಗಳ ಅವಧಿಯಲ್ಲಿ ಕಾರ್ಖಾನೆಯ ಚಿತ್ರಣವೇ ಬದಲಾಗಿದೆ ನಿರಾಣಿ ಸಂಸ್ಥೆ ಕಾರ್ಖಾನೆಯ ಪುನರುಜ್ಜೀವನಗೊಳಿಸುವ ಕೆಲಸವನ್ನು  ಆರಂಭಿಸಿದೆ. ಸುಮಾರು 600 ಜನ ಹಗಲು ರಾತ್ರಿ ದುಡಿದು ಕಾರ್ಖಾನೆಯನ್ನು ಕಬ್ಬು ಅರೆಯುವ ಕಾರ್ಯಕ್ಕೆ ಅಣಿಗೊಳಿಸುತ್ತಿದ್ದಾರೆ ಮೈಸೂರು ರಾಜವಂಶಸ್ಥರು ನಾಡಿನ ಗಣ್ಯರು ಮತ್ತು ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related