ರೈತರ ಕರೆ ಕೇಂದ್ರ ಉದ್ಘಾಟನೆ

ರೈತರ ಕರೆ ಕೇಂದ್ರ ಉದ್ಘಾಟನೆ

ಬೆಂಗಳೂರು: ರಾಜ್ಯದ ರೈತರಿಗೆ ಕಷ್ಟವಾಗಬಾರದು, ರಾಜ್ಯ ರೈತರು ಅವರ ಸಂಕಷ್ಟಗಳನ್ನು ರೈತರ ಕರೆ ಕೇಂದ್ರದ ಮೂಲಕ ಮನ ಬಿಚ್ಚಿ ಹಂಚಿಕೊಳ್ಳಬಹುದೆಂದು ಹೇಳಲಾಗುತ್ತಿದೆ.

ಹೌದು, ರೈತರಿಗೆ ಮಾಹಿತಿ ಸಲಹೆ, ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೃಷಿ ಇಲಾಖೆ ಆಯುಕ್ತಾಲಯದಲ್ಲಿ ಸ್ಥಾಪಿಸಿರುವ ಏಕೀಕೃತ ಸಹಾಯವಾಣಿ‌ ಕರೆ ಕೇಂದ್ರವನ್ನು ಕೃಷಿ ಸಚಿವರಾದ ಚಲುವರಾಯ ಸ್ವಾಮಿ ಉದ್ಘಾಟಿಸಿದರು.

ರೈತರಿಗೆ ಕೃಷಿ ಸಚಿವರು ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಇನ್ಮುಂದೆ ಏನೇ ಕಷ್ಟಗಳಿದ್ದರು ಇದರಲ್ಲಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ಆಹ್ವಾನ ನೀಡಿದ್ದಾರೆ. ಹಾಗೆ ರೈತರನ್ನು ಉದ್ದೇಶಿಸಿ ಮಾಹಿತಿ ಸಲಹೆ ನೀಡಲು ಇದರಲ್ಲಿ ನೀವು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ

ಈ ವೇಳೆ ಕೃಷಿ ಇಲಾಖೆ ಪ್ರಧಾನ‌ ಕಾರ್ಯದರ್ಶಿ ಅನ್ಬುಕುಮಾರ್,ಕೃಷಿ ಇಲಾಖೆ‌ ಆಯುಕ್ತರಾದ ವೈ ಎಸ್ ಪಾಟೀಲ್, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.

Related