ಆಡಳಿತ ಕಛೇರಿ ಉದ್ಘಾಟನೆ

ಆಡಳಿತ ಕಛೇರಿ ಉದ್ಘಾಟನೆ

ಯಡ್ರಾಮಿ :ತಾಲ್ಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಆಡಳಿತ ಕಛೇರಿ ಉದ್ಘಾಟನೆ ಸಮಾರಂಭಕ್ಕೆ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಂಗಳವಾರ ಆಗಮನದಿಂದ ರೈತ ಮೊಗದಲ್ಲಿ ಭರವಸೆಯ ಬೆಳಕು ಹೊಮ್ಮಿದೆ.

ನಂತರ ಮಾತನಾಡಿ ನಾವು ರೈತ ಹೋರಾಟಗಾರರು, ರೈತರ ಕಷ್ಟ ಎಂದು ಬಂದಾಗ ನಾವು ಸದಾ ಹೋರಾಟಕ್ಕೆ ಸಿದ್ಧ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಿದೆ, ಬೇಡವಾದ ಕಾಯ್ದೆ ತಂದು ತೊಂದರೆ ಕೊಡುತ್ತಿದೆ. ದೆಹಲಿಯಲ್ಲಿ 10 ತಿಂಗಳ ಕಾಲ ಬೀದಿಯಲ್ಲಿ ರೈತರು ಕುಂತು ಹೋರಾಟ ಮಾಡುತ್ತಿದ್ದರು ಹೊರಡಿಸಿದ ಕಾಯ್ದೆ ಹಿಂದಕ್ಕೆ ಪಡಯುತ್ತಿಲ್ಲ ಎಂದರು.
ಸಸಿಗಳಿಗೆ ನೀರು ಎರೆಯುವ ಮೂಲಕ ಕಡಕೋಳ ಮಠದ ಪರಮ ಪೂಜ್ಯರು ಚಾಲನೆ ನೀಡಿ, ಕಡಕೊಳ ಮಡಿವಾಳೆಶ್ವರ ಕೃತಿ ಬಿಡುಗಡೆ ಮಾಡಲಾಯಿತು.

ತಾಲೂಕಿನ ರೈತ ಸಂಘ ಅಧ್ಯಕ್ಷ ಈರಣ್ಣ ಭಜಂತ್ರಿ, ನೇತೃತ್ವದಲ್ಲಿ ತಾಲೂಕಿನ ರೈತರ ಸಮಸ್ಯೆಗಳನ್ನು ಮಲ್ಲಾಬಾದ ಏತ ನೀರಾವರಿ ಯೊಜನೆ, ಆಮೆಗತಿ ಕಾಮಗಾರಿ, ರೈತರು ಹೊಲಕ್ಕೆ ಹೋಗವು ದಾರಿ, ಸಹಕಾರಿ ಸಂಘದ ಕಾರ್ಯದರ್ಶಿಗಳು ಮಾಡುತ್ತಿರುವ ವಂಚನೆ ಕುರಿತು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಬಸ್ಸನಗೌಡ ಬಿರಾದಾರ, ಮಲ್ಲಣ್ಣಗೌಡ ಕೆಲ್ಲೂರ, ಮಂಜುಳಾ ಭಜಂತ್ರಿ, ಕಾರ್ತಿಕ ಹೊಸಪೇಟೆ, ಶರಣಪ್ಪ ಜೆಂಬೆರಾಳ, ಚಂದ್ರುಗೌಡ ಕೂಡಿ, ಕೆಶವರಾಯಗೌಡ ಕಾಚಪುರ, ಎಚ್.ಎರ್.ಬಡಿಗೇರ, ಅಪ್ರೊಜ್ ಅತ್ನೂರ, ಮಾನಪ್ಪ ಅಲ್ಲಾಪುರ, ಭಕ್ತರಹಳ್ಳಿ ಬೈರೇಗೌಡ, ಬಸವಂತ ಕಾಂಬಳೆ, ಅಲ್ಲಾಪಟೇಲ್ ಮಾಲಿಬಿರಾದರ, ಮಲ್ಲಣ್ಣಗೌಡ ಅಖಂಡಳ್ಳಿ, ಸಿದ್ದು ಸಾಲಿಮನಿ, ಮಲ್ಲಪ್ಪ ಮೆಲಿನಮನಿ, ಶಿವಯ್ಯ ಹಿರೇಮಠ, ಇನ್ನಿತರರಿದ್ದರು.

Related