ಕಲಬುರ್ಗಿ : ಪಟ್ಟಣದ ಹಳೆ ಜೇವರ್ಗಿ ರಸ್ತೆಯ ಉದಯನಗರದಲ್ಲಿ ಪತಿಯು ಪತ್ನಿಯನ್ನು ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಿದ ಘಟನೆ ನಡೆದಿದೆ.
ಉದಯನಗರದ ನಿವಾಸಿ ಪ್ರೇಮಸಿಂಗ್ ರಾಠೋಡ (37) ಕೊಲೆ ಆರೋಪಿ. ಪತ್ನಿ ಶೀತಲ್ (36) ಕೊಲೆಯಾದವರು. 16 ವರ್ಷಗಳ ಹಿಂದೆ ಮದುವೆಯಾಗಿದ್ದ ಮೂವರು ಮಕ್ಕಳಿದ್ದಾರೆ.
‘ಕಮಲಾಪುರ ದಿನಸಿ ತಾಂಡಾದ ಪ್ರೇಮಸಿಂಗ್ ಈಚೆಗೆ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ. ಪತ್ನಿಯೊಂದಿಗೆ ಆಗಾಗ್ಗೆ ಆತ ಜಗಳವಾಡುತ್ತಿದ್ದ. ಶನಿವಾರ ರಾತ್ರಿ 1.30ರ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ನೀರಿನ ಟ್ಯಾಂಕ್ನಲ್ಲಿ ಮುಳುಗಿಸಿದ್ದ. ನಂತರ ಪೊಲೀಸ್ ಠಾಣೆಗೆ ಬಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ ಮನೆಗೆ ತೆರಳಿ, ಪರಿಶೀಲಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ಕೊಲೆ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡ’ ಎಂದು ಪೊಲೀಸರು ತಿಳಿಸಿದರು.
ಪ್ರೇಮಸಿಂಗ್ಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಶೀತಲ್ ಪೋಷಕರು ಒತ್ತಾಯಿಸಿದ್ದಾರೆ.