ಕೊಪ್ಪಳ: ಕೋವಿಡ್-19ನಿಂದಾಗಿ ಮೃತರಾದ ಬಿಜೆಪಿ ಹಿರಿಯ ಮುಖಂಡನ ಅಂತ್ಯ ಕ್ರಿಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಗಂಗಾವತಿ ನಗರದ ವೀರಶೈವ ರುದ್ರ ಭೂಮಿಯಲ್ಲಿ ಕೋವಿಡ್-19 ನಿಯಮದಂತೆ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಮೃತರಾದ ಬಿಜೆಪಿ ಮುಖಂಡ ಸೋಮಶೇಖರ ಗೌಡ ಅವರು ಪತ್ನಿ, ಒಬ್ಬ ಪುತ್ರರನ್ನು ಅಗಲಿದ್ದಾರೆ.
ಸೋಮಶೇಖರ ಗೌಡರ ನಿಧಾನಕ್ಕೆ ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿಯ ಹಿರಿಯ ಮುಖಂಡರಾದ ಸಿಂಗನಾಳ ಪಂಪಾಪತಿ, ದಲಿತ ಮುಖಂಡ ದೇವಪ್ಪ ಕಾಮ ದೊಡ್ಡಿ, ತಿಪ್ಪೇರುದ್ರ ಸ್ವಾಮಿ ವಕೀಲರು, ಸಿಂಗನಾಳ್ ವಿರುಪಾಕ್ಷಪ್ಪ, ಕೆ ಕಾಳಪ್ಪ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.