ನಮ್ಮ ಜನರಿಗೆ ಯಾವಗ ಬುದ್ಧಿ ಬರೋದು?

  • In State
  • March 27, 2020
  • 833 Views
ನಮ್ಮ ಜನರಿಗೆ ಯಾವಗ ಬುದ್ಧಿ ಬರೋದು?

ಹಾವೇರಿ, ಮಾ. 27: ನಮ್ಮ ಸರ್ಕಾರ ಎಷ್ಟೇ ಕಾಳಜಿ ವಹಿಸಿ ಎಷ್ಟೇ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡರು ನಮ್ಮ ಜನಕ್ಕೆ ಬುದ್ಧಿ ಬರುತ್ತಿಲ್ಲ. ಇದಕ್ಕೆ ಉದಾಹರಣೆ ಇಲ್ಲಿದೆ ನೋಡಿ.

ಮನೆಯಿಂದ ಹೊರಗೆ ಬರ್ಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾ ಎಷ್ಟು ಹೇಳಿದ್ರೂ ನಮ್ಮ ಜನಕ್ಕೆ ಬುದ್ಧಿ ಬರೋದಿಲ್ಲ್ಲ ಅನ್ಸುತ್ತೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ಜನತಾ ಬಜಾರ್ ಮುಂದೆ ಸಾಮಗ್ರಿ ಕೊಂಡುಕೊಳ್ಳಲು ಬಂದ ಗ್ರಾಹಕರಿಗೆ, ಸರತಿ ಸಾಲಿನಲ್ಲಿ ನಡುವೆ ಅಂತರ ಕಾಯ್ದುಕೊಳ್ಳುವಂತೆ ಬಾಕ್ಸ್ ಗಳನ್ನ ಹಾಕಲಾಗಿತ್ತು. ಆದರೆ ಜನ ಬಾಕ್ಸ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕ್ಯೂ ನಿಲ್ಲೋದು ಬಿಟ್ಟು, ಬಾಕ್ಸ್ ಗಳಲ್ಲಿ ಚೀಲ ಮತ್ತು ಬ್ಯಾಗ್ಗಳನ್ನ ಇಟ್ಟು ಪಾಳೆ ಹಚ್ಚಿ ತಾವು ನೆರಳಲ್ಲಿ ಒಟ್ಟಾಗಿ ನಿಂತು ಮಾತನಾಡುತ್ತಿರುವ ದೃಶ್ಯ ಕಂಡುಬಂತು. ಅಂಗಡಿ ಮಾಲೀಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದರು ಕೇಳದೆ ಜನರು ಗುಂಪಾಗಿಯೇ ನಿಂತಿದ್ದರು.

 

Related