ಕೊಳಲುವಾದಕ  ಭಾಸ್ಕರ್ ಇನ್ನಿಲ್ಲ

ಕೊಳಲುವಾದಕ  ಭಾಸ್ಕರ್ ಇನ್ನಿಲ್ಲ

ಬೆಂಗಳೂರು, ಮೇ. 13 : ಖ್ಯಾತ  ಕೊಳಲುವಾದಕ  ಎಸ್.ವಿ. ಭಾಸ್ಕರ್ (54) ಅವರು ಬುಧವಾರ ಬೆಳಗ್ಗೆ ದೈವಾಧೀನರಾದರು.
ಕಳೆದ ಒಂದೂವರೆ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯ ಚಿಕಿತ್ಸೆ ಬಳಿಕ ಬನಶಂಕರಿಯ ಸಾರಕ್ಕಿಯ ತಮ್ಮ ನಿವಾಸದಲ್ಲಿಯೇ ವಿಶ್ರಾಂತಿಗೆ ಒಳಗಾಗಿದ್ದರು. ಬುಧವಾರ ಇಹಲೋಕ ತ್ಯಜಿಸಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತ, ನೃತ್ಯ, ಸುಗಮ ಸಂಗೀತ ಕ್ಷೇತ್ರದಲ್ಲಿ ಕೊಳಲು ವಾದನದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದರು.
ರಾಷ್ಟ್ರೀಯ ಅಂತಾರಾಷ್ಟ್ರೀಯ ದಿಗ್ಗಜ ಗಾಯಕರು ಹಾಗೂ ವಾದ್ಯಗಾರರ ಸಂಗೀತ ಕಛೇರಿಗಳಿಗೆ ಸಾಥ್ ನೀಡಿದ್ದರು.

Related