ಸಹಾಯ ಹಸ್ತ ಕಾರ್ಯಕ್ರಮ

ಸಹಾಯ ಹಸ್ತ ಕಾರ್ಯಕ್ರಮ

ರಾಮದುರ್ಗ:ಕೋವಿಡ್ 2ನೇ ಅಲೆಯಲ್ಲಿ ಸಾಕಷ್ಟು ಜನರು ಬಲಿಯಾಗಿದ್ದಾರೆ. ಸರ್ಕಾರ ಮಾತ್ರ ಸೂಕ್ತವಾದ ಪರಿಹಾರ ನೀಡುತ್ತಿಲ್ಲ. ಮೃತ ಕುಟುಂಬಗಳಿಗೆ ಸಾಂತ್ವಾನ ಹೇಳುವ ಸೌಜನ್ಯ ಸರ್ಕಾರಕ್ಕಿಲ್ಲ ಅದಕ್ಕಾಗಿ ಕಾಂಗ್ರೆಸ್ ಪಕ್ಷ ಕೊರೊನಾಕ್ಕೆ ಬಲಿಯಾದ ಕುಟುಂಬಗಳಿಗೆ ಭೇಟಿ ನೀಡುವ ಸಹಾಯ ಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಾಜಿ ಶಾಸಕ ಅಶೋಕ ಪಟ್ಟಣ ಹೇಳಿದರು.
ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ಸರ್ಕಾರ ಮಾತ್ರ ನೆಪಕ್ಕೆ ಮಾತ್ರ ಭರವಸೆ ನೀಡಿರುವುದು ಬೇಸರದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು..
ತಾಲೂಕಿನ 37 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊರೊನಾ ವಾರಿಯರ್ಸ್ ನೇಮಕ ಮಾಡಿದ್ದು,ಕಾರ್ಯಕ್ಷೇತ್ರದಲ್ಲಿ ಜನರ ಆರೋಗ್ಯ ಹಾಗೂ ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿ ಪರಿಹಾರ ಒದಗಿಸಲು ಸಹಾಯ ಮಾಡಬೇಕೆಂದು ಕರೆ ನೀಡಿದರು

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ.ರಂಗನಗೌಡ್ರ, ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಜಯಪ್ರಕಾಶ ಶಿಂಧೆ, ರಮೇಶ ಅಣ್ಣಿಗೇರಿ, ರವಿ ಪಂಚಗಾಂವಿ, ಗಣಪತಿ ಮಿರ್ಜಿ, ಮಲ್ಲಪ್ಪ ಪಟ್ಟೇದ, ಕೃಷ್ಣಗೌಡ ಪಾಟೀಲ, ನವೀನ ಗದಗ, ಅರ್ಜುನ ಮಳಲಿ, ಭಾಗಪ್ಪ ಪುಲಗಡ್ಡಿ, ರಮೇಶ ಇದ್ದರು.

Related