ಭಾರೀ ಮಳೆಗೆ : ಜಿಲ್ಲೆಯ ಜನರು ತತ್ತರ

ಭಾರೀ ಮಳೆಗೆ : ಜಿಲ್ಲೆಯ ಜನರು ತತ್ತರ

ಯಾದಗಿರಿ : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಖಾನಾಪುರ, ಎಸ್.ಎಚ್. ನಗನೂರ, ಶಹಾಪುರ ತಾಲೂಕಿನ ಶಾರದಹಳ್ಳಿ, ಟೊಣ್ಣುರು ,ಚಟ್ನಳ್ಳಿ, ಕಾಟಮನಹಳ್ಳಿ, ರಸ್ತಾಪುರವಡಗೇರಾ ತಾಲೂಕಿನ ಕೊಂಕಲ್ ಹಾಗೂ ಮೊದಲಾದ ಗ್ರಾಮವು ಜಲಾವೃತವಾಗಿವೆ.

100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಜನರು ರಾತ್ರಿಯಿಂದ ನಿದ್ದೆ ಮಾಡದೆ ನೀರು ಖಾಲಿ ಮಾಡಲು ಹರಸಾಹಸ ಪಡುತ್ತಿದ್ದಾರೆ.
ನಗನೂರ ಗ್ರಾಮದಲ್ಲಿ 25 ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದಲ್ಲಿ ಮೂರು ಮನೆಗಳು ಬಿದ್ದಿವೆ.

ರೈತರು ಸಾಲ ಮಾಡಿ ರೈತರು ಭತ್ತ, ಹತ್ತಿ ಬೆಳೆ ಬೆಳೆದಿದ್ದರು. ಆದರೆ, ಮಳೆ ಅಬ್ಬರಕ್ಕೆ ಬೆಳೆ ಹಾನಿಯಾಗಿದೆ. ಮಳೆ ಅಬ್ಬರಕ್ಕೆ ಜನರು ಈಗ ನೆಮ್ಮದಿ ಕಳೆದುಕೊಂಡಿದ್ದಾರೆ. ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Related