ಕೆ.ಆರ್ ಪುರಂನಲ್ಲಿ ವರುಣನಾರ್ಭಟ !

ಕೆ.ಆರ್ ಪುರಂನಲ್ಲಿ ವರುಣನಾರ್ಭಟ !

ಕೆ.ಆರ್.ಪುರ: ಬುಧವಾರ ಸುರಿದ ಧಾರಾಕಾರ ಮಳೆಯಿಂದ ಕೆ.ಆರ್.ಪುರದ ಹಲವು ಭಾಗಗಳಲ್ಲಿ ಮನೆಗಳಿಗೆ, ರಸ್ತೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥವಾಗಿತ್ತು.

ಬೆಂಗಳೂರಿನ ರಾಮಮೂರ್ತಿನಗರದ ವಿಜಿನಾಪುರ ಮಸೀದಿ ರಸ್ತೆ, ಟಿ.ಸಿ.ಪಾಳ್ಯದ ಪಟಾಕಿ ಗೋದಾಮು, ಗೆದ್ದಲಹಳ್ಳಿಯ ಎಸ್ ಎಟಿಪಿ ಘಟಕ ಮತ್ತು ಎಸ್ ಎಟಿಪಿ ಘಟಕದ ಪಕ್ಕದಲ್ಲಿರುವ ಫಾರ್ಚೂನ್ ಲಿವಾ ಅಪಾರ್ಟ್ ಮೆಂಟ್ ಗಳಿಗೆ ನೀರು ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಕಾರು, ಟಿವಿ.ಪ್ರಿಡ್ಜು, ದವಸ ಧಾನ್ಯಗಳು ನೀರು ಪಾಲು ಆಗಿತ್ತು.

ರಾಜಾಕಾಲುವೆ ಒತ್ತುವರಿಯಾದ್ದರಿಂದ ಈ ಭಾಗದ ಹಲವು ಮನೆಗಳ ಜನರು ತೊಂದರೆ ಅನುಭವಿಸುವಂತಾಯಿತು. ಎಂಬತ್ತುಕ್ಕೂ ಹೆಚ್ಚು ಮನೆಗಳು ಮಳೆ ನೀರು ನುಗ್ಗಿತ್ತು. ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮುನ್ನೂರಕ್ಕೂ ಹೆಚ್ಚು ಮನೆಗಳು ನೀರಿನಿಂದ ಜಲವ್ರತಗೊಂಡಿದ್ದವು.

 

Related