6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದ ಆರೋಪಿಯನ್ನು ಗಲ್ಲಿಗೇರಿಸಿ

6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಹತ್ಯೆಗೈದ ಆರೋಪಿಯನ್ನು ಗಲ್ಲಿಗೇರಿಸಿ

ಚಿಂಚೋಳಿ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಗೋರ ಸೇನಾ ಮತ್ತು ತಾಲ್ಲೂಕ ಬಂಜಾರ ಸದಸ್ಯರಿಂದ ತೆಲಂಗಾಣ ರಾಜ್ಯದ ಹೈದರಾಬಾದ್ ನಗರದಲ್ಲಿ 6 ವರ್ಷದ ಬಾಲಕಿ ಚೈತ್ರಾಳ ಅತ್ಯಾಚಾರ ಮತ್ತು ಹತ್ಯೆಗೈದಿರುವ ಆರೋಪಿಯನ್ನು ಗಲ್ಲಿಗೇರಿಸ ಬೇಕೆಂದು ಪ್ರತಿಭಟನೆ ಮಾಡಲಾಯಿತು.

ಈ ಪ್ರತಿಭಟನೆಯಲ್ಲಿ ಗೋರ ಸೇನಾ ತಾಲ್ಲೂಕಾಧ್ಯಕ್ಷ ಯಮರಾಜ ಪವಾರ್ ಅವರು ಮಾತನಾಡಿ ನಮ್ಮ ಬಂಜಾರ ಸಮುದಾಯದ 6 ವರ್ಷದ ಕಂದಮನಿಗೆ ಅತ್ಯಾಚಾರ ಮಾಡಿ ಹತ್ಯೆಗೈದ ಆ ರಾಕ್ಷಸ ಮನಸ್ಥಿತಿಯುಳ್ಳ ಆರೋಪಿಯನ್ನು ಕೂಡಲೇ ಗಲ್ಲಿಗೇರಿಸಿ ಆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಅದರಂತೆ ಕುಟುಂಬಕ್ಕೆ ಕೂಡಲೇ ಸರ್ಕಾರಿ ನೌಕರಿ ಮತ್ತು ಪರಿಹಾರ ಮೊತ್ತವನ್ನು ಕೊಡಬೇಕೆಂದರು. ಬಂಜಾರ ಸಮಾಜದ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪವಾರ್ ಮಾತನಾಡಿ ಆ ಗೋಮುಖ ವ್ಯಾಘ್ರದುಷ್ಟ ವ್ಯಕ್ತಿಯನ್ನ ಕೂಡಲೇ ನೇಣಿಗೆ ಏರಿಸಿ ಆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ತೆಲಂಗಾಣದ ರಾಜ್ಯಪಾಲರಿಗೆ ಮಂಳವಾರ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಶೋಕ್ ಚವಾಣ್, ಗೋಪಾಲ ಜಾಧವ್, ವಿಜಯ ರಾಠೋಡ್, ಸಂತೋಷ್ ರಾಥೋಡ್, ರಾಜು ಚೌಹಾಣ್, ಶಿವಾಜಿ ರಾಠೋಡ, ಹೀರಾಲಾಲ್ ರಾಠೋಡ್,ಕಿಶನ್, ತಾರಾಸಿಂಗ್, ಗಣಪತಿ, ರಾಜೇಶ್ ,ಅರುಣ್, ಇನ್ನೂ ಹಲವಾರು ಬಂಜಾರ ಸಮಾಜದ ಬಾಂಧವರು ಇದ್ದರು.

Related