ಜನ್ಮ ದಿನ ಆಚರಿಸದ ಗ್ರಾ.ಪಂಗಳು

ಜನ್ಮ ದಿನ ಆಚರಿಸದ ಗ್ರಾ.ಪಂಗಳು

ಕೊರಟಗೆರೆ : ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 114ನೇ ಜನ್ಮದಿನಾಚರಣೆ ಅಂಗವಾಗಿ ಸೋಮವಾರ ಪ್ರತಿ ಸರ್ಕಾರಿ ಕಛೇರಿಗಳಲ್ಲಿ ಸರ್ಕಾರದ ಆದೇಶದಂತೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಬೇಕು.

ಆದರೆ ಕೊರಟಗೆರೆ ತಾಲೂಕಿನ ಬಹುತೇಕ ಗ್ರಾ.ಪಂ ಗಳಲ್ಲಿ ಇಂದು ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಅವರಿಗೆ ಅಗೌರವ ಸೂಚಿಸಿರುವುದು ಕಂಡು ಬಂದಿದೆ.
ಸದರಿ ವಿಚಾರವಾಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಣಾಧಿಕಾರಿ ಶಿವಪ್ರಕಾಶ್ ರವರನ್ನು ಸಂಪರ್ಕಿಸಿದಾಗ ನಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಪಂಚಾಯತಿಯಲ್ಲಿ ಬಾಬುಜಗಜೀವನ ರಾಮ್ ರವರ ಜಯಂತಿ ಆಚರಣೆ ಮಾಡಿರುತ್ತಾರೆ ಎಂದು ಬೇಜವ್ದಾರಿ ಉತ್ತರ ನೀಡಿದ್ದಾರೆ.

ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ದೊಡ್ಡಯ್ಯ ರಾಜ್ಯವೇ ಮಾಜಿ ಪ್ರಧಾನಿ ಡಾ ಬಾಬು ಜಗಜೀವನ ರಾಮ್ ರವರ ಜನ್ಮದಿನಾಚರಣೆಯನ್ನು ಸರ್ಕಾರ ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಆದರೆ ನಮ್ಮ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬೇಜವಬ್ದಾರಿ ಮತ್ತು ನಿರ್ಲಕ್ಷ್ಯ ತೋರಿದ್ದಾರೆ ಎಂದು ಹೇಳಿ ಖಂಡಿಸಿದರು.

ನಮ್ಮ ತಾಲೂಕಿನಲ್ಲಿ 24 ಗ್ರಾಮ ಪಂಚಾಯತಿ ಗಳಿದ್ದು ಕೇವಲ 13 ಪಂಚಾಯತಿ ಗಳಲ್ಲಿ ಆಚರಿಸಿದ್ದಾರೆ.
ಸಂಭಂದಿಸಿದ ಮೇಲಧಿಕಾರಿಗಳು ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ತಾಲೂಕು ಅಧ್ಯಕ್ಷರು ಕೂಡಲೇ ಗಮನಹರಿಸಿ ಶಿಸ್ತು ಕ್ರಮಜರುಗಿಸಲು ಕೋರಿದ್ದಾರೆ.

Related