ಗ್ರಾ.ಪಂ ನವೀಕೃತ ಕಟ್ಟಡ ಲೋಕಾರ್ಪಣೆ

ಗ್ರಾ.ಪಂ ನವೀಕೃತ ಕಟ್ಟಡ ಲೋಕಾರ್ಪಣೆ

ನಾಗಮಂಗಲ : ಹಳೆಯದಾದ ದುಸ್ಥಿತಿಯಲ್ಲಿದ್ದ ಕಟ್ಟಡ ಅವಶ್ಯಕತೆಗೆ ಅಗನುಗುಣವಾಗಿ ನಿಯಮಾನುಸಾರ ಸುಸ್ಥಿತಿಗೊಳಿಸಿ ನವೀಕರಿಸಲಾಗಿರುವ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಹೊಣಕೆರೆ ಗ್ರಾ.ಪಂ ಕಾರ್ಯಾಲಯದ ಕಟ್ಟಡವನ್ನು ವರಮಹಾಲಕ್ಷ್ಮೀ ಪೂಜೆಯ ದಿನದಂದು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು.

ಪಂಚಾಯತಿಯ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಒಂದು ಕುಟುಂಬದ ಸದಸ್ಯರಂತೆ ಸೇರಿ ವರಮಹಾಲಕ್ಷ್ಮೀ ಪೂಜೆ ಸಲ್ಲಿಸಿದ್ದಲ್ಲದೆ, ಘನತ್ಯಾಜ್ಯ ವಿಲೇವಾರಿಗಾಗಿ ಖರೀದಿಸಲಾಗಿರುವ ವಾಹನಕ್ಕೆ ಚಾಲನೆ ನೀಡಿದರು.

ಜನಪ್ರತಿನಿಧಿಗಳು ಉದ್ಘಾಟನೆಯ ಶಿಲನ್ಯಾಸ ಅನಾವರಣ ಮಾಡಿದರೆ ಕುಡಿಯುವ ನೀರಿನ ನಿರ್ವಾಹಕರು ಕಟ್ಟಡವನ್ನು ಉದ್ಘಾಟಿಸಿ. ಅಧ್ಯಕ್ಷ ರಾಜಕುಮಾರ್ ಸಾರ್ವಜನಿಕ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡುವ ಮೂಲಕ ಸ್ವಾತಂತ್ರ‍್ಯ ಭಾರತದ ಅಮೃತ ಮಹೋತ್ಸವ ನೆನಪಿಗೆ ಅರ್ಪಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೊಣಕೆರೆ ಗ್ರಾ.ಪಂ ಅಧ್ಯಕ್ಷ ರಾಜಕುಮಾರ್, ಪಂಚಾಯತಿ ವ್ಯಾಪ್ತಿಯ ಸಮಸ್ತ ನಾಗರೀಕರಿಗೆ ಶುಭಾಶಯ ತಿಳಿಸಿದರಲ್ಲದೆ, ಯಾವುದೇ ವಿಷಯವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೊದಲು ಆಡಳಿತ ಕೇಂದ್ರ ಸ್ಥಾನ ಮಾದರಿಯಾಗುರಬೇಕೆನ್ನುವ ಉದ್ದೇಶದಿಂದ ಕೈಗೊಳ್ಳಲಾದ ಕಾಮಗಾರಿಗೆ ಸಹಕರಿಸಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಕುಟುಂಬ ಸದಸ್ಯರು, ಪಿಡಿಒ ಸುರೇಶ್ ಸೇರಿದಂತೆ ಬಹುತೇಕ ಎಲ್ಲಾ ಸಿಬ್ಬಂದಿಗಳು ಇನ್ನಿತರರಿದ್ದರು.

Related