ಮನೆ ಬಾಗಿಲಿಗೆ ಸರ್ಕಾರ ಬರುವುದು ಕೇವಲ ಲಂಚ ಪಡೆಯುವುದಕ್ಕೆ: ಯತ್ನಾಳ್

ಮನೆ ಬಾಗಿಲಿಗೆ ಸರ್ಕಾರ ಬರುವುದು ಕೇವಲ ಲಂಚ ಪಡೆಯುವುದಕ್ಕೆ: ಯತ್ನಾಳ್

ವಿಜಯಪುರ: ಕಾಂಗ್ರೆಸ್ ಸರ್ಕಾರ ಇತ್ತೀಚಿಗೆ ನಗರದಲ್ಲಿ ಬಾಗಿಲಿಗೆ ಬಂದು ಸರ್ಕಾರ ಸೇವೆಗಿರಲಿ ಸಹಕಾರ ಎಂಬ ಅಭಿಯಾನದ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದೆ. ಇನ್ನು ಇದರ ಬಗ್ಗೆ ಬಸವರಾಜ್ ಯತ್ನಾಳ್ ಅವರು ಟೀಕೆ ಮಾಡಿದ್ದಾರೆ.

ಮನೆ ಬಾಗಿಲಿಗೆ ಸರ್ಕಾರ ಬರುವುದು ಕೇವಲ ಲಂಚ ಪಡೆಯುವುದಕ್ಕೆ ಹೊರಟಾಗಿ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಲು ಬರುವುದಿಲ್ಲವೆಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸವರಾಜ್ ಯತ್ನಾಳ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟನ್ನು ಮಾಡಿದ್ದಾರೆ.

ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅಧ್ಯಕ್ಷರಾಗಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಅಕ್ರಮ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

ಬಾಬರ್ ಸಮಾಧಿಯನ್ನು ಅಪಘಾನಿಸ್ತಾನದಲ್ಲಿ ಹುಡುಕಿಕೊಂಡು ಹೋದ ಇಂದಿರಾ ಗಾಂಧಿಯ ಪಕ್ಷ ಶ್ರೀ ರಾಮನನ್ನು ಒಪ್ಪಲು ಹೇಗೆ ಸಾಧ್ಯ? ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಹಾಗೂ ಎಲ್ಲಾ ನಕಲಿ ಗಾಂಧಿಗಳು ಬಾಬರ್ ಸಮಾಧಿಗೆ ಹೋಗಿ ನಮಾಜ್ ಮಾಡಿ ಬಂದಿದ್ದರು. ಇವರು ಅಯೋಧ್ಯೆಗೆ ಬರದೇ ಇರುವುದೇ ಒಳ್ಳೆಯದು ಎಂದು ಚಾಟಿ ಬೀಸಿದ್ದಾರೆ.

ಭೂತ ಪಿಶಾಚಿಗಳು ಮಹಾವೀರ ಹನುಮನ ಹೆಸರು ಕೇಳಿದ ಕೂಡಲೇ ಓಡಿ ಹೋಗುವುದು ಎಂದು ಹನುಮಾನ್ ಚಾಲೀಸಾ ಹೇಳಿದೆ ಎಂದು ಯತ್ನಾಳ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

Related