ಗಾಂಧಿ ಪುರಸ್ಕಾರ ಪಡೆದು ಮೈಮರೆತ ಗ್ರಾ.ಪಂ

ಗಾಂಧಿ ಪುರಸ್ಕಾರ ಪಡೆದು ಮೈಮರೆತ ಗ್ರಾ.ಪಂ

ಚಿಂಚೋಳಿ :  ತಾಲೂಕಿನ ದೇಗಲ್ಮಡಿ ಗ್ರಾಮವು ರಾಜ್ಯ ಸರ್ಕಾರದಿಂದ ಈ ಹಿಂದೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗಾಂಧಿ ಕನಸು ಸಾಕಾರಗೊಳಿಸಲಾಗಿದೆ ಎಂದು ಗಾಂಧಿ ಪುರಸ್ಕಾರ ಪಡೆದು ಇದೀಗ ಮೈಮರೆತ ಗ್ರಾ.ಪಂ ಎಂಬಂತಾಗಿದೆ.

ಗ್ರಾಮದಲ್ಲಿ ಸ್ವಚ್ಛತೆ ಕಾಣದಂತಾಗಿದೆ. ಬೀದಿ ದ್ವೀಪಗಳು ಇಲ್ಲದಂತಾಗಿವೆ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಹಿಂದೇಟು ಹಾಕುತ್ತಿದೆ. ಹೇಳುತ್ತ ಸಾಗಿದರೆ ಸಮಸ್ಯೆಗಳ ಪಟ್ಟಿ ಸಾಗುತ್ತದೆ. ಕೇಳಿದರೆ ಕೂಸು ಹುಟ್ಟುವ ಮೊದಲೇ ಕೂಲಾಯಿ ಹೋಲಿಸಲು ಬರಬೇಡಿ ಎಂದು ಹಾರಿಕೆ ಉತ್ತರ ನೀಡುವ ಅಧಿಕಾರಿಗಳೇ ಹೆಚ್ಚಾಗಿದ್ದಾರೆ.

ಮಾರಕ ರೋಗಗಳಿಂದ ತುತ್ತಾಗಬೇಕೆ. ರಾತ್ರಿಯ ವೇಳೆ ವಿಷ ಜಂತುಗಳಿಗೆ ತುತ್ತಾಗಬೇಕೆ..? ಅನಾಹುತ ತಪ್ಪಿಸಲು ಅಧಿಕಾರಿಗಳು ಮುಂದಾಗಬೇಕು ಗ್ರಾಮ ಸ್ವರಾಜ್ಯದ ಗಾಂಧಿಜೀ ಕನಸು ಸಾಕಾರಗೊಳಿಸಲು ಅಧಿಕಾರಿಗಳು, ಚುನಾಯಿತ ಜನರ ಪ್ರತಿನಿಧಿಗಳು ಮುಂದಾಗಬೇಕು ಎಂಬ ಮನವಿಯನ್ನು ಸಾರ್ವಜನಿಕರ ಪರ ಅವಿನಾಶ್ ಗೋಸುಲ್ ಒತ್ತಾಯಿದ್ದಾರೆ.

Related