ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸಿ

  • In State
  • August 7, 2021
  • 528 Views
ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸಿ

ಹಾನಗಲ್ : ಮಾಸಿಕ ವೇತನ, ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಅಡುಗೆ ಸಿಬ್ಬಂದಿಯವರು ಶುಕ್ರವಾರದಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಸಮಿತಿಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿದರು. ಮಹಾಮಾರಿಯಿಂದಾಗಿ ಜೂ, ಜು, ಆ, ತಿಂಗಳ ಮಾಸಿಕ ವೇತನವನ್ನು ನೀಡಿಲ್ಲ. ಕೂಡಲೇ ಬಿಡುಗಡೆ ಮಾಡಬೇಕು. ಮಾಸಿಕ ಕನಿಷ್ಟ 21 ಸಾವಿರ ರೂ. ವೇತನ ನಿಗದಿಗೊಳಿಸಿ, ಇಎಸ್‌ಐ, ಪಿಎಫ್ ಯೋಜನೆ ಜಾರಿಗೊಳಿಸಿ, ಡಿ ಗ್ರೂಪ್ ಸಿಬ್ಬಂದಿ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂಘಟನೆಯ ರಾಜ್ಯಾಧ್ಯಕ್ಷ ಹೊನ್ನಪ್ಪಮರೆಮ್ಮನವರ, ಜಿಲ್ಲಾಧ್ಯಕ್ಷ ಜಿ.ಡಿ.ಪೂಜಾರ, ಹಾನಗಲ್ಲ ತಾ. ಅಧ್ಯಕ್ಷೆ ನಿರ್ಮಲಾ ಬಂಕಾಪೂರಮಠ, ವಿನಾಯಕ ಕುರುಬರ, ಗುರುನಾಥ ಲಕ್ಮಾಪೂರ, ಅಶೋಕ ಕಾಳೆ, ಅಂಬಿಕಾ ಉಳವಿ, ಹೇಮಾವತಿ ಕಲ್ಲಾಪೂರ, ಪಾತಿಮಾ ಯಳವಟ್ಟಿ, ಶಾಂತಮ್ಮ ಕಂಚಿನೆಗಳೂರ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Related