ಸಂಸದೆ ಸುಮಲತಾಗೆ ಸವಾಲು ಹಾಕಿದ ಮಾಜಿ ಸಂಸದ

ಸಂಸದೆ ಸುಮಲತಾಗೆ ಸವಾಲು ಹಾಕಿದ ಮಾಜಿ ಸಂಸದ

ಮಂಡ್ಯ : ಜಿ.ಪಂ ಚುನಾವಣೆಗೆ ಸ್ವಾಭಿಮಾನದ ಅಭ್ಯರ್ಥಿಗಳನ್ನು ಹಾಕಲಿ ಎಂದು ಮಾಜಿ ಸಂಸದ ಶಿವರಾಮೇಗೌಡ ಸಂಸದೆ ಸುಮಲತಾಗೆ ಚಾಲೆಂಜ್ ಹಾಕಿದ್ದಾರೆ.

ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ, ಸಂಸದೆ ಸುಮಲತಾಗೆ ಸರಿಯಾದ ಅಡ್ವೈಸರ್ ಇಲ್ಲ. ಅವರು ಒಂದು ಪಕ್ಷಕ್ಕೆ ಸೇರಿಕೊಳ್ಳಲಿ, ಬಿಜೆಪಿ ಇಲ್ಲ ಕಾಂಗ್ರೆಸ್ ಯಾವುದಾದರು ಸೇರಲಿ. ಯಾವ ಪಕ್ಷವನ್ನು ಸೇರದಿದರೆ ವಾಟ್ ನೆಕ್ಟ್? ಎಂದು ಪ್ರಶ್ನಿಸಿದ್ದಾರೆ.

ಮಂಡ್ಯ ಜನ ದಡ್ಡರಲ್ಲ, ಒಂದು ಸಲ ಯಮಾರಿಸಿದ್ದೀರಾ, ಮತ್ತೆ ಯಮಾರಲ್ಲ. ಯಾವುದಾದರೂ ಒಂದು ಪಕ್ಷ ಸೇರಿ, ಆಗ ಅಲ್ಲಿನ ಮುಖಂಡರಾದರೂ ನಿಮ್ಮ ಜೊತೆ ಬರುತ್ತಾರೆ,’ ಎಂದು ಸುಮಲತಾಗೆ ಜೆಡಿಎಸ್ ಮಾಜಿ ಸಂಸದ ಶಿವರಾಮೇಗೌಡ ರಾಜಕೀಯ ಕಿವಿಮಾತು ಹೇಳಿದರು.

Related