ಕಾಮಗಾರಿ ಸ್ಥಗಿತಗೊಳಿಸಲು ಒತ್ತಾಯ

ಕಾಮಗಾರಿ ಸ್ಥಗಿತಗೊಳಿಸಲು ಒತ್ತಾಯ

ಮುದ್ದೇಬಿಹಾಳ : ತಾಲೂಕಿನ ನಾಗಬೇನಾಳ ತಾಂಡಾದ 84 ರ ಜಮೀನಿನಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಸ್ಥಾವರದ ಕಾಮಗಾರಿಯನ್ನು ನ್ಯಾಯಾಲಯದ ಆದೇಶ ಬರುವರೆಗೂ ಸ್ಥಗಿತಗೊಳಿಸಬೇಕು ಎಂದು ರೈತರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು. ಕಚೇರಿಯಲ್ಲಿ ಗ್ರೇಡ್- ತಹಶೀಲ್ದಾರ್ ಡಿ.ಜಿ. ಕಳ್ಳಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈತರ ಸಂಘದ ಜಿಲ್ಲಾಧ್ಯಕ್ಷ ಸಿದ್ಧನಗೌಡ ಬಿರಾದಾರ ಅವರು, ಈಗಾಗಲೇ ವಿದ್ಯುತ್ ಸ್ಥಾವರದ ಕಾಮಗಾರಿ ಸ್ಥಗಿತಗೊಳಿಸುವಂತೆ ಸಿಎಂ, ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳಿಗೆ ಹಲವಾರು ಮನವಿ ಪತ್ರ ನೀಡಿದ್ದೇವೆ.

ಸದರಿ ಜಮೀನಿಗೆ ಸಂಬAಧಿಸಿದAತೆ ಈಗಾಗಲೇ ಉಚ್ಛನ್ಯಾಯಾಲಯ ಕಲಬುರಗಿ, ಉಪ ವಿಭಾಗಾಧಿಕಾರಿಗಳು, ವಿಜಯಪುರ ಪ್ರಕರಣ ದಾಖಲಿಸಿದ್ದು ದೇಶದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲ ನ್ಯಾಯಾಲಯಗಳು ಬಂದ್ ಆಗಿವೆ.

ನ್ಯಾಯಾಲಯದ ಅಂತಿಮ ತೀರ್ಮಾನ ಬರುವವರೆಗೂ ಯಾವುದೇ ಕಾರಣಕ್ಕೂ ಅಲ್ಲಿ ಕಾಮಗಾರಿ ನಿರ್ವಹಿಸಬಾರದು ಒಂದು ವೇಳೆ ಕಾಮಗಾರಿ ಆರಂಭಿಸಿದ್ದೇ ಆದಲ್ಲಿ ತಹಸೀಲ್ದಾರ್ ಕಚೇರಿಯ ಎದುರಿಗೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Related