ಪ್ರವಾಹಕ್ಕೆ : ಎನ್‌ಡಿಆರ್‌ಎಫ್ ತಂಡ ನಿಯೋಜನೆ

ಪ್ರವಾಹಕ್ಕೆ : ಎನ್‌ಡಿಆರ್‌ಎಫ್ ತಂಡ ನಿಯೋಜನೆ

ರಾಯಚೂರು : ಮಳೆಯ ಅಬ್ಬರ ಹೆಚ್ಚಾಗುತ್ತಿರುವ ಕಾರಣ ಜಿಲ್ಲೆಯಲ್ಲಿ ಪ್ರವಾಹದ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಕಂದಾಯ ಇಲಾಖೆ ವಿಪತ್ತು ನಿರ್ವಹಣ ಮುಖ್ಯ ಕಾರ್ಯದರ್ಶಿ ಎನ್‌ಡಿಆರ್‌ಎಫ್(ನ್ಯಾಷನಲ್ ಡಿಸೆಸ್ಟರ್ ರೆಸ್ಪಾನ್ಸ್ ಫೋರ್ಸ್)ತಂಡವನ್ನು ನಿಯೋಜಿಸಿದ್ದಾರೆ.

ಈ ತಂಡಗಳಿಗೆ ಕೋವಿಡ್-19 ಸಾಂಕ್ರಾಮಿಕ ರೋಗದ ಸುರಕ್ಷತೆಯೊಂದಿಗೆ ಇವರ ವಾಸ್ತವ್ಯಕ್ಕೆ ದೇವಸೂಗುರು ದೇವಸ್ಥಾನದ ವಸತಿ ಶೆಲ್ಟರ್‌ನಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ಪ್ರವಾಹದ ಸಂದರ್ಭದಲ್ಲಿ ಈ ತಂಡವನ್ನು ಬಳಸಿಕೊಳ್ಳಲಾಗುವುದು ಒಬ್ಬರು ಮುಖ್ಯಸ್ಥರೊಂದಿಗೆ 24 ಜನ ಸಿಬ್ಬಂದಿ ಇದ್ದು 2 ರಬ್ಬರ್ ಬೋಟ್ ಮತ್ತು ಪ್ರವಾಹಕ್ಕೆ ಬೇಕಾಗುವ ಸಲಕರಣೆಯೊಂದಿಗೆ ಟ್ರಕ್ ನಲ್ಲಿ ಆಗಮಿಸಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Related