ನೀಲಗಿರಿ ತೋಪಿಗೆ ಬೆಂಕಿ

ನೀಲಗಿರಿ ತೋಪಿಗೆ ಬೆಂಕಿ

ಕೆ.ಆರ್.ಪುರ, ಫೆ. 19: ವರ್ತೂರು ಬಳಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಸಮೀಪದಲ್ಲಿರುವ ನೀಲಗಿರಿ ತೋಪಿಗೆ ಬೆಂಕಿ ಅನಾಹುತ ನಡೆದಿದ್ದು, ಈ ಬೆಂಕಿ ಅನಾಹುತದಲ್ಲಿ ಸುಮಾರು ಮುಕ್ಕಾಲು ಭಾಗ ನೀಲಗಿರಿ ಮರಗಳು ಬೆಂಕಿಗಾಹುತಿಯಾಗಿವೆ. ನೀಲಗಿರಿ ತೋಪಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ.

ಇನ್ನೂ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ವರ್ತೂರು ಪೊಲೀಸರು ಬೇಟಿ ನೀಡಿ ಬೆಂಕಿ ನಂದಿಸಲು ಅಗ್ನಿಶಾಮಕ ಹರಸಾಹಸ ಪಟ್ಟಿದ್ದಾರೆ.

 

Related