ರಸ್ತೆ ದುರಸ್ತಿಗೊಳಿಸದಿದ್ದರೆ ಹೋರಾಟ ಆಗ್ರಹ

ರಸ್ತೆ ದುರಸ್ತಿಗೊಳಿಸದಿದ್ದರೆ ಹೋರಾಟ ಆಗ್ರಹ

ಸಿರುಗುಪ್ಪ : ಬಗ್ಗೂರು ಕ್ರಾಸ್ ನಿಂದ ನಗರಕ್ಕೆ ಹೋಗುವ ರಸ್ತೆ ಮಾರ್ಗಗಳಲ್ಲಿ ಅಲ್ಲಲ್ಲಿ ತಗ್ಗು ಗುಂಡಿಗಳು ಬಿದ್ದಿರುವ ಪರಿಣಾಮ ಜನಸಾಮಾನ್ಯರು ಜೀವ ಭಯದಿಂದಲೇ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ಶ್ರೀನಗರ ಮತ್ತು ಚಾಣಕನೂರು ಗ್ರಾಸ್ ಮಧ್ಯ ರಾರಾವಿ ಗ್ರಾಮದ ದಂಪತಿಗಳು ಇದೇ ರಸ್ತೆಯ ಮಾರ್ಗವಾಗಿ ಸಂಚಾರಿಸುವ ಸಂದರ್ಭದಲ್ಲಿ ಅಳವಾದ ಗುಂಡಿಗಳು ಬಿದ್ದಿರುವ ಗುಂಡಿ ಕಾಣದೆ ಬೈಕ್ ನಿಂದ ಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಅದರೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಗ್ರಾಮೀಣ ಭಾಗದ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ನಗರಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿ ಅಲ್ಲಲ್ಲಿ ರಸ್ತೆ ಗುಂಡಿಗಳು ಬಿದ್ದಿರುವುದು ರಸ್ತೆ ಗುಂಡಿಗಳು ಕಾಣದಂತಾಗಿದೆ ಪ್ರಾಣಹಾನಿಯಾಗುವ ಸಂಭವವಿರುವುದರಿAದ ಸಂಬAಧ ಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕು ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ವಿ. ಹುಲುಗಯ್ಯ ಎಚ್ಚರಿಸಿದ್ದಾರೆ.

Related