ಜೆಡಿಎಸ್‌ನಿಂದ ಉಚ್ಛಾಟಿಸುವುದಾಗಿ ಹೇಳಿದ್ದಾರೆ : ಜಿಟಿಡಿ

ಜೆಡಿಎಸ್‌ನಿಂದ ಉಚ್ಛಾಟಿಸುವುದಾಗಿ ಹೇಳಿದ್ದಾರೆ : ಜಿಟಿಡಿ

ಮೈಸೂರು : ಜೆಡಿಎಸ್ ವಿರುದ್ಧ ಮಾತನಾಡಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಈ ವೇಳೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೈಸೂರಿಗೆ ಬಂದು ಜೆಡಿಎಸ್ ಪಕ್ಷದಿಂದ ತಮ್ಮನ್ನು ಉಚ್ಛಾಟಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ. ಅಪಸ್ವರ ಎತ್ತಿಲ್ಲ ಎಲ್ಲೂ ಪಕ್ಷದ ಬಗ್ಗೆ ಮಾತನಾಡಿಲ್ಲ. ಏಕೆ ಹೀಗೆ ಮಾತನಾಡಿದ್ದಾರೆ ತಿಳಿದಿಲ್ಲ ಎಂದು ತಿಳಿಸಿದರು.

ಸಮಿತಿಯಲ್ಲಿ ನನ್ನ ಹೆಸರಿಲ್ಲ. ಮೈಸೂರಿಗೆ ಬೇರೆಯವರನ್ನು ನೇಮಿಸಿದ್ದಾರೆ. ಏಕೆ ನನ್ನನ್ನು ಕೈ ಬಿಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ನೋವನ್ನು ಎಲ್ಲೂ ಯಾವತ್ತೂ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ರಾಜಕೀಯ ಭವಿಷ್ಯ ನೋಡಿದರೆ ಬಹಳ ಕಷ್ಟ ಇದೆ ಎಂದು ಮಾರ್ಮಿಕವಾಗಿ ನುಡಿದರು. ಮೈಸೂರು ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಜೆಡಿಎಸ್ ಸಭೆ ನಡೆಸಲಾಗಿದೆ. ಸಭೆಗೆ ನನ್ನನ್ನು ಆಹ್ವಾನಿಸಿಯೂ ಇಲ್ಲ. ಸಲಹೆ ಪಡೆದಿಲ್ಲ ಎಂದರು.

Related