ನರಗುಂದ : ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆ ಪರಿಣಾಮ ನರಗುಂದ ತಾಲ್ಲೂಕಿನ ಕುರ್ಲಗೇರಿ ಬಳಿಯಲ್ಲಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ತಲುಪಿದೆ. ಹಳ್ಳಕ್ಕೆ ಕಟ್ಟಲಾದ ಸೇತುವೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸುಂದರೇಶ ಬಾಬು ಹಾಗೂ ಎಸ್ಪಿ ಎನ್. ಯತೀಶ ಮತ್ತು ತಾಲ್ಲೂಕ ಆಡಳಿತ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕಳೆದ ಆಗಷ್ಟದಲ್ಲಿ ಹೆಚ್ಚಿನ ಮಳೆ ಪರಿಣಾಮ ಅನೇಕ ಗ್ರಾಮಗಳು ನೀರಾವೃತಗೊಂಡು ಜನತೆ ಜೀವನ ತೊಂದರೆಯಲ್ಲಿತ್ತು. ಈ ಬಾರಿ ಹೀಗಾಗದಂತೆ ಅಗತ್ಯದ ಪೂರ್ವ ಜಾಗೃತಿ ವಹಿಸಲು ತಾಲ್ಲೂಕಾ ಆಡಳಿತ ಅಧಿಕಾರಿಗಳಿಗೆ ಸೂಚಿಸಿದರು.
ಧಾರವಾಡ ಜಿಲ್ಲೆಯ ಮೇಲ್ಬಾಗದಲ್ಲಿ ಹೆಚ್ಚಿನ ಮಳೆ ಕಳೆದ ಎರಡು ದಿನಗಳಿಂದ ಸುರಿದಿದೆ. ಮಳೆ ಪ್ರಮಾಣ ಆ ಭಾಗದಲ್ಲಿ ಕಡಿಮೆ ಯಾಗುತ್ತಿದೆ ಎಂಬ ಮಹಿತಿ ಲಭ್ಯವಾಗಿದೆ. ಇಷ್ಟಾದರೂ ಜಿಲ್ಲಾ ಮತ್ತು ತಾಲ್ಲೂಕ ಆಡಳಿತ ಮುಂಜಾಗೃತೆಯಿAದ ಇರಲು ಸರ್ಕಾರದಿಂದ ನಿರ್ದೆಶನ ಇದ್ದ ಪರಿಣಾಮ ಎಲ್ಲ ಅಧಿಕಾರಿಗಳು ಜಾಗೃತಿ ವಹಿಸಿ ಕಾರ್ಯದಲ್ಲಿ ತೊಡಗುವಂತೆ ಸೂಚಿಸಿದರು.