ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ: ಸಚಿವ ಬಿ ನಾಗೇಂದ್ರ

ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ: ಸಚಿವ ಬಿ ನಾಗೇಂದ್ರ

ಬೆಂಗಳೂರು: ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವರಾದ ಬಿ ನಾಗೇಂದ್ರ ಅವರು ಒಂದು ಜಿಲ್ಲೆ ಒಂದು ಕ್ರೀಡೆಗೆ ಉತ್ತೇಜನ ನೀಡುವ ಮೂಲಕ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಒಲಿಂಪಿಕ್ ಮತ್ತು ಪ್ಯಾರ ಒಲಿಂಪಿಕ್ ನಲ್ಲಿ ಭಾಗವಹಿಸಿ ವಿಜೇತರಾಗಿರುವ ಕ್ರೀಡಾಪಟುಗಳಿಗೆ ಗ್ರೂಪ್ ಎ ಮತ್ತು ಬಿ ಕೆಲಸಕ್ಕೆ ಮೀಸಲಾತಿ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ 3 ಪರ್ಸೆಂಟ್ ನೇಮಕಾತಿಗೆ ಅವಕಾಶ ನೀಡಿ ಕಳೆದ ಸರ್ಕಾರಕ್ಕಿಂತ ಒಂದು ಪ್ರತಿಶತ ಹೆಚ್ಚಿಸಲಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ವಸ್ತು ಸಂಗ್ರಹಾಲಯ ಮತ್ತು ಕ್ರೀಡಾ ಹಾಸ್ಟೆಲ್ ಗೆ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮುಖ್ಯಮಂತ್ರಿ ಗಳು ಉದ್ದೇಶಿಸಿದ್ದಾರೆ ಎಂದು ತಿಳಿಸಿದರು.

 

 

Related