ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ.

ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ.

ಬೆಂಗಳೂರು, ಜು 23 : ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ವಾರ್ಡ್ ನಂ ೧೭೪ ಪರಂಗಿಪಾಳ್ಯ ಹಾಗೂ ಗುಂಡುತೋಪು ಭಾಗದಲ್ಲಿ ಶನಿವಾರ ಶಾಸಕರ ನಿಧಿಯಿಂದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ  ಸರ್ಕಾರದ ಮುಖ್ಯ ಸಚೇತಕ ಹಾಗೂ ಶಾಸಕ ಎಂ ಸತೀಶ್ ರೆಡ್ಡಿರವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರವಿ, ಕಾರ್ಯಪಾಲಕನ ಅಭಿಯಂತರರಾದ ರಾಥೋಡ್ ಸಹಾಯಕ ಕಾರ್ಯಪಾಲಕನ ಅಭಿಯಂತರರಾದ ರವಿಕುಮಾರ್ ಇನ್ನಿತರರು ಭಾಗವಹಿಸಿದರು.

Related