ವರದಕ್ಷಿಣೆ ಕಿರುಕುಳ: ಆತ್ಮಹತ್ಯೆ

ವರದಕ್ಷಿಣೆ ಕಿರುಕುಳ: ಆತ್ಮಹತ್ಯೆ

ಬೆಂಗಳೂರು : ಉತ್ತರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಗಂಡನ ಕುಟುಂಬದವರಿಂದ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಗುಟ್ಟಹಳ್ಳಿ ನಿವಾಸಿ ರಂಜನಿ (25) ಮೃತ ಗೃಹಿಣಿ. ಮೂಲತಃ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಹೊಸಹಳ್ಳಿ ನಿವಾಸಿ ಬಾಲ ಮುರುಗನ್ ಜೊತೆ ವಿವಾಹವಾಗಿದ್ದು, 2 ವರ್ಷದ ಹಿಂದೆ ಹೆಣ್ಣು ಮಗುವೊಂದು ಜನಿಸಿತ್ತು.

ರಂಜನಿ ಹಾಗೂ ಬಾಲ ಮುರುಗನ್ ಮದುವೆ ವೇಳೆ ಕೊಡಬೇಕಿದ್ದ ವರದಕ್ಷಿಣೆ ಬಾಕಿ ಇದ್ದ ಕಾರಣ ಪ್ರತಿನಿತ್ಯ ಪತಿಯಾದ ಬಾಲಮುರುಗನ್, ಮೈದುನ ಹಾಗೂ ಅತ್ತೆ ಪಳನಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಪತಿ ಬಾಲಮುರುಗನ್ ಹಾಗೂ ಅವರ ಕುಟುಂಬದ ಮೇಲೆ ಮಾದನಾಕಯನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related