ಬಿಜೆಪಿ ಬಿಟ್ಟಿ ಪ್ರಚಾರ ಪಡೆಯುತ್ತಿದೆ: ಡಿಕೆಶಿ

ಬಿಜೆಪಿ ಬಿಟ್ಟಿ ಪ್ರಚಾರ ಪಡೆಯುತ್ತಿದೆ: ಡಿಕೆಶಿ

ಮಹದೇವಪುರ: ಬಿಜೆಪಿಯವರು ಸರ್ಕಾರದ ದಿನಸಿ ಕಿಟ್‍ಗಳ ಮೇಲೆ ತಮ್ಮ ಭಾವಚಿತ್ರ ಸ್ಟಿಕ್ಕರ್ ಗಳನ್ನು ಅಂಟಿಸಿಕೊಂಡು ಬಿಟ್ಟಿ ಪ್ರಚಾರ ಪಡಿಯುತ್ತಿದ್ದಾರೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಕ್ಷೇತ್ರದ ಬಿದರಹಳ್ಳಿ ಗ್ರಾಮದಲ್ಲಿ ಬಡ ಕೂಲಿ ಕಾರ್ಮಿಕರಿಗೆ, ವಲಸಿಗರಿಗಾಗಿ ಬಿದರಹಳ್ಳಿ ಪಂಚಾಯತಿ ಉಪಾಧ್ಯಕ್ಷ ಬಿ.ಜಿ ರಾಜೇಶ್ ಸಿದ್ದಪಡಿಸಿದ್ದ 1500 ದಿನಸಿ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

ನಮ್ಮ ಪಕ್ಷದ ಮುಖಂಡರು ತಮ್ಮ ಸ್ವಂತ ಹಣದಿಂದ ದಿನಸಿ ಸಾಮಗ್ರಿಗಳನ್ನು ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ವಿತರಿಸುತ್ತಿರುವುದು ಖುಷಿಯ ವಿಚಾರವಾಗಿದ್ದು, ಕೆಪಿಸಿಸಿ ವತಿಯಿಂದ ಅವರಿಗೆ ಅಭಿನಂದನೆಗಳು ಎಂದರು.

ಇದೇ ಶುಕ್ರವಾರ ಡಿಕೆಶಿ ಅವರ ಹುಟ್ಟುಹಬ್ಬವಿರುವುದರಿಂದ ಇಲ್ಲಿನ ಮುಖಂಡರು ಸಿದ್ದಪಡಿಸಿದ್ದ ಕೇಕ್ ಕತ್ತರಿಸಿ ಅಭಿಮಾನಿಗಳ ಮಧ್ಯೆ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಹಗದೂರು ವಾರ್ಡ್ ಪಾಲಿಕೆ ಸದಸ್ಯ ಎಸ್.ಉದಯ್ ಕುಮಾರ್, ಮುಖಂಡರಾದ ಚಂದ್ರು, ಮುನಿರಾಜ್ ಬಿ.ಎಲ್. ಮಂಜುನಾಥ್ ಸೇರಿದಂತೆ ಮತ್ತಿತರರಿದ್ದರು.

Related