ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಮವಸ್ತ್ರ ವಿತರಣೆ

ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಮವಸ್ತ್ರ ವಿತರಣೆ

ಹಗರಿಬೊಮ್ಮನಹಳ್ಳಿ : ತಾಲೂಕಿನ ಮಾಲವಿ ಗ್ರಾಮದ ಸಮಾಹಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಸಮವಸ್ತç ವಿತರಿಸಲಾಯಿತು.

ಈ ವೇಳೆ ಶಾಲೆಯ ಮುಖ್ಯ ಶಿಕ್ಷಕ ಗೋವೀಂದಸ್ವಾಮಿ ಮಾತನಾಡಿ, ಕೊರೋನಾ ಸಂಕಷ್ಟದ ದಿನಗಳಲ್ಲಿ ಶಾಲೆ ತೆರೆಯುವ ವಿಷಯವಾಗಿ ಸರ್ಕಾರದ ಆದೇಶ ಬಂದಿರುವುದಿಲ್ಲ.

ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಉದ್ದೇಶದಿಂದ ಸರ್ಕಾರದಿಂದ ಬಂದಿರುವ ಪಠ್ಯಪುಸ್ತಕ ಸಮವಸ್ತ್ರ ವಿತರಿಸಲಾಗಿದ್ದು, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಅನಗತ್ಯವಾಗಿ ಓಡಾಡದೇ ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯ ಬಗ್ಗೆ ಪೋಷಕರು ಸಹ ವಿಶೇಷ ಕಾಳಜಿ ವಹಿಸಬೇಕು ಎಂದರು.

ಶಾಲೆಯ ಶಿಕ್ಷಕ ಎಂ.ಶಂಭುಲಿಂಗಪ್ಪ,  ಪರಮೇಶ್ವರಯ್ಯ ಸೊಪ್ಪಿಮಠ, ಸಂತೋಷ ಕುಮಾರ್, ಯು.ಮಲ್ಲೇಶ್.ಎಜಿ ಚನ್ನಪ್ಪ, ಕೆ.ಗಾಳೇಪ್ಪ, ಶಿಕ್ಷಕ ನೀಲಮ್ಮ, ನಾಗಲಕ್ಷ್ಮೀ ಸರೋಜ, ಅಕ್ಕ ಮಹಾದೇವಿ ಶಾಲಾ ವಿದ್ಯಾರ್ಥಿಗಳು ಪೋಷಕರು ಇದ್ದರು.

Related