3 ಸಾವಿರ ಕುಟುಂಬಗಳಿಗೆ ಬಕೇಟ್‍ ವಿತರಣೆ

  • In State
  • February 12, 2020
  • 360 Views
3 ಸಾವಿರ ಕುಟುಂಬಗಳಿಗೆ ಬಕೇಟ್‍ ವಿತರಣೆ

ಕಾಗವಾಡ, ಫೆ. 12: ಕಾಗವಾಡ ತಾಲೂಕಿನ ಏಕೈಕ್ಯ ಮಂಗಸೂಳಿ ಗ್ರಾಮ ಪಂಚಾಯತಿಯ 3,000 ಕುಟುಂಬಗಳಿಗೆ ರಾಜ್ಯ ಸರ್ಕಾರ 10 ಲಕ್ಷ ರೂ. ವೆಚ್ಚದಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಲು ಘಟಕ ಸ್ಥಾಪಿಸಿ ಹಸಿ ಮತ್ತು ಒನ ತ್ಯಾಜ್ಯ ವಸ್ತುಗಳು ಸಂಗ್ರಹಿಸಲು ಬಕೇಟ್‍ಗಳು ವಿತರಿಸುವ ಕಾರ್ಯಕ್ರಮ ಗ್ರಾಪಂ ಅಧ್ಯಕ್ಷ ಅಮರ ಪಾಟೀಲ, ಸದಸ್ಯರು ಮತ್ತು ಪಿಡಿಓ ಮಾಡಿದರು.

ಮಂಗಳವಾರ ರಂದು ಮಂಗಸೂಳಿ ಗ್ರಾಮದಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಾಹಿತ್ಯ ಸಂಗ್ರಹಿಸಲು ಬಕೇಟ್‍ಗಳು ವಿತರಿಸಿದರು. ಸರ್ಕಾರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಇವರು ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಈ ಘಟಕ ಪ್ರಾರಂಭಿಸಲು 20 ಲಕ್ಷ ರೂ. ಮಂಜೂರುಗೊಳಿಸಿ. ಅದರಲ್ಲಿಯ 10 ಲಕ್ಷ ರೂ. ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಬೇರೆ ಬೇರೆ ತಾಲೂಕ್ಕುಗಳಲ್ಲಿ 7 ಘಟಕ ಮಂಜೂರುಗೊಳಿಸಿದ್ದಾರೆ. ಕಾಗವಾಡ ತಾಲೂಕಿನಲ್ಲಿ ಮಂಗಸೂಳಿ ಗ್ರಾಮವನ್ನು ಆಯ್ಕೆಮಾಡಿದ್ದಾರೆ. 3 ಸಾವಿರ ಕುಟುಂಬಗಳಿಗೆ ಬಕೇಟ್‍ಗಳು ವಿತರಿಸಿ, ಸಂಗ್ರಹಿಸಿದ್ದ ತ್ಯಾಜ್ಯ ವಸ್ತುಗಳು ಸಾಗಾಟ ಮಾಡಲು ವಾಹನ ಖರಿದಿಸಲಿದ್ದಾರೆ. ಮತ್ತು ಗೊಬ್ಬರ ತೈಯಾರಿಸುವ ಘಟಕ ಪ್ರಾರಂಭಿಸುವ ಕಾಮಗಾರಿಗೆ ಪೂಜೆ ಸಲ್ಲಿಸಿದರು.

ಮಂಗಸೂಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಆರ್.ಹಿರೇಮಠ ಮಾಹಿತಿ ನೀಡುವಾಗ ರಾಜ್ಯ ಸರ್ಕಾರದ ಪಂಚಾಯತಿ ಇಲಾಖೆ ವತಿಯಿಂದ ಮಂಗಸೂಳಿ ಗ್ರಾಮ ಆಯ್ಕೆಮಾಡಿ ಯೋಜನೆ ನೀಡಿದ್ದಾರೆ. ಇದು ಯಶಸ್ವಿಗೊಳಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು. ಬೆಳಗಾವಿ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪನ್ನವರ, ಕಾಗವಾಡ ಅಧಿಕಾರಿ ಈರಣಗೌಡರ ಎಗಣಗೌಡರ ಸಹಕರಿಸಿದ್ದಾರೆ. ಇವರಿಗೆ ಪಂಚಾಯತಿ ವತಿಯಿಂದ ಅಭಿನಂದನೆ ಸಲ್ಲಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಅಮರ ಪಾಟೀಲ, ಮಾಜಿ ಅಧ್ಯಕ್ಷ ಬಾಬಾಸಾಹೇಬ ಪಾಟೀಲ ಇವರು ರಾಜ್ಯ ಸರ್ಕಾರ ತಾಲೂಕಿನಲ್ಲಿ ಮಂಗಸೂಳಿ ಗ್ರಾಮ ಆಯ್ಕೆಮಾಡಿ, ಸ್ವಚ್ಛ ಗ್ರಾಮ ನಿರ್ಮಿಸಲು ನೀಡಿದ ಯೋಜನೆ ಯಶಸ್ವಿಗೊಳಿಸಲು ಎಲ್ಲರು ಸಿದ್ಧರಾಗಿದ್ದೇವೆ. ನಿರ್ದೇಶನ ನೀಡಿದಂತೆ ಗ್ರಾಮಸ್ಥರು ಸಹಕರಿಸಬೇಕೆಂದು ಕರೆ ನೀಡಿ, ಬಕೇಟ್‍ಗಳನ್ನು ವಿತರಿಸಿದರು.

ತಾಲೂಕಾ ಪಂಚಾಯತಿ ಮಾಜಿ ಅಧ್ಯಕ್ಷ ಬಾಬಾಸಾಹೇಬ ಪಾಟೀಲ, ಚಿದಾನಂದ ಮಾಳಿ, ಸದಸ್ಯ ಸಂಭಾಜಿ ಪಾಟೀಲ, ಉಪಾಧ್ಯಕ್ಷ ಕಮಲ ಭಾನುಶೆ, ಸದಸ್ಯರಾದ ಸಾವಂತ ಆದೂಕೆ, ಮಲ್ಲಪ್ಪಾ ಮಗದುಮ್, ಅಮೀರ ಶೇಖ್, ಪರಶುರಾಮ ಸಾವಂತ, ಮಹೇಶ ಹರಳೆ, ಚಂದ್ರಕಾಂತ ಕೆಂಗಾರೆ, ಗೋಪಾಳ ಪಾಟೀಲ, ಧೊಂಡಿರಾಮ ವಾಘಮೋಡೆ, ಶಂಕರ ಮಮದಾಪುರೆ, ಸೇರಿದಂತೆ ಎಲ್ಲ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

 

Related