ಅಭಿವೃದ್ದಿ ಕಾರ್ಯಗಳೇ ಶ್ರೀರಕ್ಷೆ: ಕೃಷ್ಣಪ್ಪ

ಅಭಿವೃದ್ದಿ ಕಾರ್ಯಗಳೇ ಶ್ರೀರಕ್ಷೆ: ಕೃಷ್ಣಪ್ಪ

ಬೊಮ್ಮನಹಳ್ಳಿ: ಸಿಂಗಸಂದ್ರ ವಾರ್ಡ್ ತ್ರಿವೇಣಿ ಸಂಗಮದ ಹಾಗೆ ವಿಶಿಷ್ಟ ವಾರ್ಡ್. 3 ಜನ ಶಾಸಕರಿಗೂ ವಾರ್ಡ್ನ ಕೆಲ ಭಾಗಗಳು ಸೇರಿದ್ದು, ಬಿಜೆಪಿಯ ಇಬ್ಬರು ಶಾಸಕರು ಅಭಿವೃದ್ದಿಯೆಡೆಗೆ ಹೆಚ್ಚಿನ ಒತ್ತು ನೀಡಿದ್ದೇವೆಂದು ಶಾಸಕ ಎಂ. ಕೃಷ್ಣಪ್ಪ ನುಡಿದರು.
ಸಿಂಗಸಂದ್ರ ವಾರ್ಡ್ನ ಸುಭಾಷ್ ನಗರದಲ್ಲಿ ಮನೆ ಮನೆಗಳಿಗೆ ತೆರಳಿ ಬಿಜೆಪಿಗೆ ಮತ ನೀಡುವಂತೆ ಬೆಂ.ದ.ವಿ. ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ಶಾಸಕರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು, ನನ್ನ ಅಭಿವೃದ್ದಿ ಕಾರ್ಯಗಳೇ ನನ್ನ ಗೆಲುವಿಗೆ ಕಾರಣವಾಗಲಿದೆ ಎಂಬ ಭರವಸೆಯ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಸುಮಾರು 100ಕ್ಕೂ ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ಕೇಶವ್ ರಾಜು, ರಮೇಶ್ ಆರಾಧ್ಯ, ಚಿಕ್ಕ ಬೇಗೂರು ಪ್ರಶಾಂತ್, ಲೋಕೇಶ್, ಹರೀಶ್, ತ್ಯಾಗರಾಜ್, ಶೇಖರ್, ಹಾಗೂ ಸುಭಾಷ್‌ನಗರ ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related