ಬಿಜೆಪಿಗೆ ದೇವೇಗೌಡರ ತಿರುಗೇಟು

  • In State
  • March 1, 2020
  • 462 Views
ಬಿಜೆಪಿಗೆ ದೇವೇಗೌಡರ ತಿರುಗೇಟು

ಹಾಸನ, ಮಾ.1 : ಎತ್ತಿನಹೊಳೆ ಯೋಜನೆಯನ್ನು ಬೇರೆಡೆ ತಿರುಗಿಸುವುದು ಸಮಂಜಸವಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ವಿಷಯಲ್ಲಿ ಸುಮ್ಮನೇ ಕೂರುವುದಿಲ್ಲ. ನನ್ನ ಹುಟ್ಟುಗುಣ ಹೋರಾಟ ಅದರಂತೆಯೇ ನಾನು ಹೋರಾಡುತ್ತೇನೆ ಎಂದರು. ನೀರಾವರಿ ವಿಷಯದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ. ಎತ್ತಿನಹೊಳೆ ಯೋಜನೆಯಲ್ಲಿ ಯಾರು ಏನು ಮಾಡುತ್ತಾರೆ ಗಮನಿಸುತ್ತೇನೆ.ಯಾವ ಭಾಗಕ್ಕೂ ನಾನುಕೂಲವಾಗಬಾರದು. ಈ ಯೋಜನೆ ಉದ್ದೇಶ ಕೋಲಾರಕ್ಕೆ ಕುಡಿಯುವ ನೀರು ನೀಡಬೇಕು ಎಂಬುದು. ಮೊದಲು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿ ಎಂದು ಹೇಳಿದರು.

ನಮ್ಮ ಪಕ್ಷವನ್ನು ಪುನಶ್ಚೇತನಗೊಳಿಸೋ ವಿಚಾರಕ್ಕೆ ಬಿಜೆಪಿಯವರು ಟೀಕೆ ಮಾಡಿದ್ದಾರೆ. ಮಗ, ಮೊಮ್ಮಗ ಇಬ್ಬರೂ ಸೇರಿಕೊಂಡು ಪಕ್ಷ ಕಟ್ಟಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ ಎಂದರು.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಜೊತೆ ಮಾತನಾಡಿದ್ದಾರೆ.ಈ ವಿಷಯದ ಬಗ್ಗೆ ನನ್ನೊಂದಿಗೂ ಚರ್ಚಿಸಿದ್ದಾರೆ. ಆದರೆ ರಾಜ್ಯಾದ್ಯಂತ ನಾನೇ ಸಂಚರಿಸಿ ಪಕ್ಷ ಕಟ್ಟುತ್ತೇನೆ.

Related