ಕರ್ನಾಟಕ ವನ್ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿಎಂ

ಕರ್ನಾಟಕ ವನ್ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿಎಂ

ರಾಮನಗರ: ಸಾಮಾನ್ಯವಾಗಿ ಸರ್ಕಾರಿ ಕೆಲಸ ಮಾಡುವವರು ರಜೆ ದಿನಬಂತೆಂದರೆ ಸಾಕು ಮುಜು ಮಸ್ತಿ ಮಾಡಲು ಬಯಸುತ್ತಾರೆ.

ಆದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಕ್ಷೇತ್ರದಲ್ಲಿ ಕರ್ನಾಟಕ ವನ್ ಗೆ ಭೇಟಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದನ್ನು ಖುದ್ದಾಗಿ ಅವರೇ ಬಂದು ಇಂದು ಶನಿವಾರ ಪರೀಕ್ಷಿಸಿದರು.

ಹೌದು, ಡಿ.ಕೆ.ಶಿವಕುಮಾರ್ ತಮ್ಮ ಕ್ಷೇತ್ರ ಕನಕಪುರದಲ್ಲಿ ಕರ್ನಾಟಕ ವನ್ ಕೇಂದ್ರವೊಂದಕ್ಕೆ ಭೇಟಿ ನೀಡಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಸೆಂಟರ್ ನಲ್ಲಿ ಕೂತು ಅರ್ಜಿ ನಮೂನೆಯನ್ನು ನೋಡಿ, ನನ್ನ ಮತ್ತು ಸಿದ್ದರಾಮಯ್ಯನವರ ಫೋಟೊಗಳು ಜೊತೆಯಾಗಿ ಬರ್ಬೇಕು ಕಣ್ರಯ್ಯ, ಮೇಲೆ ಕೆಳಗೆ ಮಾಡಿದ್ದೀರಲ್ಲ ಅಂತ ಅಲ್ಲಿನ ಸಿಬ್ಬಂದಿಯೊಂದಿಗೆ ಜೋಕ್ ಮಾಡಿದರು. ಖುದ್ದು ಉಪ ಮುಖ್ಯಮಂತ್ರಿಯೇ ಸರ್ಕಾರದ ಯೋಜನೆಯೊಂದರ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಖುದ್ದಾಗಿ ಅದೂ ರಜಾದಿನ ವೀಕ್ಷಿಸುವುದು ಅಭಿನಂದನಾರ್ಹ.

Related