ಮಳೆಯಿಂದ ಹಾನಿ : ಶಾಸಕ ಭೇಟಿ

ಮಳೆಯಿಂದ ಹಾನಿ : ಶಾಸಕ ಭೇಟಿ

ಜೇವರ್ಗಿ : ಪಟ್ಟಣದಲ್ಲಿ ರವಿವಾರ ಮಧ್ಯಾಹ್ನದಿಂದ ದಿನವಿಡಿ, ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಹಳ್ಳಿಗಳು ಅಲ್ಲದೇ, ಪಟ್ಟಣದ ಬಸವೇಶ್ವರ ನಗರ, ಖಾಜಾ ಕಾಲೋನಿ, ಜೋಪಡ ಪಟ್ಟಿ, ಗಾಂಧಿ ನಗರದ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾದ ಹಿನ್ನಲೆ, ಶಾಸಕ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಅವರು ಮನೆಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

ನೀರು ನುಗ್ಗಿದ ಮನೆಗಳನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು, ಈಗಾಗಲೇ ನಮ್ಮ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ, ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿದ್ದು ನನ್ನ ಗಮನಕ್ಕೆ ಬಂದಿದೆ.  ಯಾವುದೇ ರೈತರು ಭಯಪಡುವ ಅವಶ್ಯಕತೆಯಿಲ್ಲ, ನಿಮ್ಮೆಲ್ಲರ ಜೋತೆಗೆ ನಾವಿದ್ದೇವೆ ಎಂದು ರೈತರಿಗೆ ಧೈರ್ಯತುಂಬಿ, ಈ ವಾರ್ಡಗಳಲ್ಲಿ ನೀರು ಎಲ್ಲಿಂದ ಬರುತ್ತಿವೆ ಎನ್ನುವುದನ್ನು ಪರಿಗಣಿಸಿ ಮುಂದೆ ಬರುವ ಮಳೆಯ ನೀರು ಈ ಮನೆಗಳಲ್ಲಿ ಬರದಹಾಗೆ ನೋಡಿಕೊಳ್ಳಬೇಕು, ಎಂದು ಸ್ಥಳದಲ್ಲಿದ್ದ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಅಗತ್ಯಕ್ರಮ ಕೈಗೊಳ್ಳಲು ಹಾಗೂ ಕೂಡಲೇ ಗಂಜಿ ಕೇಂದ್ರ ಸ್ಥಾಪಿಸುವಂತೆ ಸೂಚನೆ ನೀಡಿದರು.

Related