ಕೊರೋನಾ ಹೆಚ್ಚಾಗಲು ಮೋದಿ ಕೈಗೊಂಡ ನಿರ್ಧಾರಗಳೇ ಕಾರಣ

ಕೊರೋನಾ ಹೆಚ್ಚಾಗಲು ಮೋದಿ ಕೈಗೊಂಡ ನಿರ್ಧಾರಗಳೇ ಕಾರಣ

ಬಾಗಲಕೋಟೆ: ಕೊರೋನಾ ಸೋಂಕು ಹೆಚ್ಚಾಗಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನಿರ್ಧಾರಗಳೇ ಕಾರಣ ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.

ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕರದ ಶಾಸಕರು, ಸಚಿವರು ಸೇರಿದಂತೆ ಬಿಜೆಪಿಯ ಸಂಸದರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಪ್ರಧಾನಮಂತ್ರಿ ಪರಿಹಾರ ನಿಧಿ ಸಂಗ್ರಹಕ್ಕೆ ನಿಂತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

ಕ್ಷೇತ್ರದಲ್ಲಿ ಅಕ್ರಮವಾಗಿ ಮರಳುಗಾರಿಕೆ ಹಾಗೂ ಕ್ಲಬ್‍ಗಳನ್ನು ನಡೆಸುತ್ತಿರುವ ಶಾಸಕ ಪುತ್ರ ರಾಜು ಗೌಡ ಪಾಟೀಲ್ ಅವರಿಗೆ ಡಿವೈಎಸ್‍ಪಿ ಸಿಪಾಯಿ ಹಾಗೂ ಸ್ಥಳೀಯ ಪಿಎಸ್‍ಐ ಕೂಡ ಸಹಕಾರ ನೀಡುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದರು.

Related