ಪೊಲೀಸರ ಭರ್ಜರಿ ಬೇಟೆ

ಪೊಲೀಸರ ಭರ್ಜರಿ ಬೇಟೆ

ಹೊಸಕೋಟೆ, ಮಾ.3 : ಹೊಸಕೊಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಪೊಲೀಸರು ಅಂದಾಜು 8-10 ಲಕ್ಷ ಬೆಲೆ ಬಾಳುವ ಎರಡು ಆನೆಯ ದಂತಗಳನ್ನು ವಶಪಡಿಸಿಕೊಂಡು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮೂಲತಃ ತಮಿಳುನಾಡು ಹಾಗೂ ಆಂಧ್ರಮೂಲದ ಅಮ್ಜದ್ ಖಾನ್, ಸಯದ್ ಇರ್ಷಾದ್, ನವೀದ್ ಅಹಮ್ಮದ್, ಮೆಹಬೂಬ್ ಪಾಷಾ, ಮುಜಾಮಿಲ್ ಸುಹೇಲ್ ಬಂಧಿತ ಆರೋಪಿಗಳು. ಕೋಲಾರ ತಾಲೂಕಿನ ಮಾಲೂರು ಮಾರ್ಗದ ಮೂಲಕ ದುನ್ನಸಂದ್ರ ಮಾರ್ಗವಾಗಿ ಬೆಂಗಳೂರು ನಗರಕ್ಕೆ ಕಾರಿನಲ್ಲಿಆನೆ ದಂತವನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯ ಪಿಎಸೈ ರಾಕೇಶ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಡಿವೈಎಸ್ಪಿ ನಿಂಗಪ್ಪ ಬಸಪ್ಪ ಸಕ್ರಿ, ಸಿಪಿಐ ರಘು ಹಾಗೂ ಪಿಎಸೈ ರಾಕೇಶ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ವ್ಯಾಪ್ತಿಯ ಬೋಧನಹೊಸಹಳ್ಳಿ ಗ್ರಾಮದ ಮೊರೆಯೊಂದರಲ್ಲಿನಿಂತು ಕಾಯುತ್ತಿರುವ ಸಂದರ್ಭದಲ್ಲಿ ದುನ್ನಸಂದ್ರ ಕಡೆಯಿಂದ ಬಂದ ಒಂದು ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನಲ್ಲಿದ್ದವರು ವಿಚಾರಣೆ ವೇಳೆ ಅನುಮಾನಸ್ಪದವಾಗಿ ಉತ್ತರ ನೀಡಿದ್ದರು. ಇದೇ ವೇಳೆ ಹಿಂಬದಿಯಿಂದ ಮತ್ತೊಂದು ಕಾರಿನಲ್ಲಿದ್ದವರು ಕೂಡ ವಿಚಾರಣೆ ವೇಳೆ ಕಾರನ್ನು ಪರಿಶೀಲಿಸಿದಾಗ ಹಿಂಬದಿಯಲ್ಲಿಒಂದು ಪಂಚೆಯಲ್ಲಿ 2 ಆನೆಯ ದಂತಗಳು ಇರುವುದು ಕಂಡು ಬಂದು ತಕ್ಷಣ ಎರಡು ಆನೆಯ ದಂತಗಳನ್ನು ಹಾಗೂ ಎರಡು ಕಾರು ಹಾಗೂ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Related