ಆನೇಕಲ್ : ಕಸಬಾ ಹೋಬಳಿ ಹೊನ್ನಕಳಸಾಪುರ ಗ್ರಾಮದ ಅನಧಿಕೃತವಾಗಿ ಕಲ್ಯಾಣ ಮಂಟಪ ನಿರ್ಮಿಸುತ್ತಿದ್ದಾರೆ. ಮಾಜಿ ಗ್ರಾ.ಪಂ ಸದಸ್ಯ ಗೋಪಾಲಯ್ಯ ನವರು ಆರೋಪ ಮಾಡುತ್ತಿದ್ದಾರೆ.
ಎಂ.ಜೆ.ಇನ್ಪ್ರಾಸ್ಟ್ರಕ್ಚರ್ ಪ್ರೈ. ಲಿಮಿಟೆಡ್ ಎಂಬುವರು ಅನಧಿಕೃತವಾಗಿ ಕಲ್ಯಾಣ ಮಂಟಪವನ್ನು ಬಾರ್ ಅಂಡ್ ರೆಸ್ಟೋರೆಂಟ್ ನಿರ್ಮಾಣ ಮಾಡುತ್ತಿದ್ದಾರೆ.
ಸ್ಥಳಕ್ಕೆ ತಹಸಿಲ್ದಾರ್ ಮಹದೇವಯ್ಯನವರು ಆಡಳಿತಾಧಿಕಾರಿ ಪಂಚಾಯಿತಿ ಪಿಡಿಓ ಹೀಗೆ ಎಲ್ಲಾ ಅಧಿಕಾರಿಗಳು ಪರಿಶೀಲನೆ ನಡೆಸಿ ಕೂಡಲೇ ಕೆಇಬಿ ವಿದ್ಯುತ್ ಸ್ಥಗಿತಗೊಳಿಸಬೇಕು. ನಿರ್ಮಾಣ ಮಾಡುತ್ತಿರುವ ಕೆಲಸವನ್ನು ಕೂಡಲೇ ನಿಲ್ಲಿಸಬೇಕು.
ಸರ್ಕಾರಿ ಜಾಗವನ್ನು ಪರಿಶೀಲಿಸಿ ಅಳತೆ ಮಾಡಿದ ಕಾಮಗಾರಿಗೆ ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ಹೇಳಿದರು. ಸರ್ಕಾರಿ ದಾರಿಯನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ ಆದ್ದರಿಂದ ಅಧಿಕಾರಿಗಳು ಹಾಗೂ ಜನಸಾಮಾನ್ಯರು ಸಹಕರಿಸಬೇಕು. ಮುಂದಿನ ಪೀಳಿಗೆಗೆ ಬದುಕಲು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.