ಮೈಸೂರು : ಕಾಂಗ್ರೆಸ್ನಲ್ಲಿ ತಮ್ಮ ಸೋಲಿಗ ತಾವೇ ಕಾಯುತ್ತಿದ್ದಾರೆ ಈಗ ನಡೆದಿರುವ ಎರಡು ಉಪಚುನಾವಣೆ, ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಿಶ್ಚಿತ ಎಂದು ಸಚಿವ ಎಸ್.ಟಿ ಸೋಮೇಶಖರ್ ಅವರು ಸೋಮವಾರ ಹೇಳಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿ, ಕಾಂಗ್ರೆಸ್ನವರು ಪರಸ್ಪರ ಸೋಲುವುದನ್ನ ಕಾಯುತ್ತಿದ್ದಾರೆ. ಸೋತ ಮೇಲೆ ಸಿದ್ದರಾಮಯ್ಯರಿಂದ ಸೋತೆವು ಎಂದು ಡಿಕೆಶಿ ಬಣ ದೂರುತ್ತದೆ. ಡಿಕೆಶಿ ಅವರಿಂದ ಸೋತೇವು ಅಂತ ಸಿದ್ದರಾಮಯ್ಯ ಬಣ ದೂರುತ್ತದೆ. ಇದು ಕಾಂಗ್ರೆಸ್ ಸದ್ಯದ ಸ್ಥಿತಿ ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ ತೆಗಿಯಲೇಬೇಕು ಅಂತ ಡಿಕೆಶಿ ಲಾಬಿ ಮಾಡುತ್ತಿದ್ದಾರೆ. ಡಿಕೆಶಿ ತೆಗಿಬೇಕು ಅಂತ ಸಿದ್ದರಾಮಯ್ಯ ಬಣ ಲಾಬಿ ಮಾಡುತ್ತಿದೆ. ಇವರಲ್ಲೇ ಪರಸ್ಪರ ತಡೆದುಕೊಳ್ಳಲು ಆಗುತ್ತಿಲ್ಲ ಇದನ್ನು ಮುಚ್ಚಿಕೊಳ್ಳಲು ನಮ್ಮ ಪಕ್ಷದ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತ್ತಿದ್ದಾರೆ ಅಷ್ಟೇ. ಫಲಿತಾಂಶ ಬಂದ ಮೇಲೆ ಆ ಪಕ್ಷದಲ್ಲಿ ಏನೆಲ್ಲ ಬದಲಾವಣೆ ಆಗುತ್ತೆ ನೋಡಿ ಎಂದರು.