ಕೆ.ಎಸ್.‌ ಈಶ್ವರಪ್ಪ ವಿರುದ್ದ ಕಾಂಗ್ರೆಸ್‌ ವಾಗ್ದಾಳಿ

ಕೆ.ಎಸ್.‌ ಈಶ್ವರಪ್ಪ ವಿರುದ್ದ ಕಾಂಗ್ರೆಸ್‌ ವಾಗ್ದಾಳಿ

ಬೆಂಗಳೂರು,ಸೆ.22: ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ಷೇಪಾರ್ಹ ಪದಬಳಕೆ ಮಾಡಿದ್ದ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಪ್ರತಿಕ್ರಿಯಿಸಲಾಗಿದ್ದು, ಅತೃಪ್ತ ಆತ್ಮದಂತೆ ಬಡಬಡಿಸುತ್ತಿರುವ ಈಶ್ವರಪ್ಪ ಅವರೇ, ಯೋಗ್ಯರು ಯಾರು, ಅಯೋಗ್ಯರು ಯಾರು ಎಂದು ರಾಜ್ಯದ ಜನ ತೀರ್ಮಾನಿಸಿ ತೀರ್ಪು ಕೊಟ್ಟಾಗಿದೆ ಎಂದು ಹೇಳಿದ್ದಾರೆ.

ನಿಮ್ಮ ಪಕ್ಷ ನಿಮ್ಮ ಮಂತ್ರಿಗಿರಿ ಕಿತ್ತುಕೊಂಡು, ಅದೆಷ್ಟೇ ಬಡಿದಾಡಿದರೂ ಮಂತ್ರಿ ಮಾಡದೆ ಮನೆಯಲ್ಲಿ ಕೂರಿಸಿದ್ದು ಶೇ. 40 ಕಳ್ಳನೆಂದೋ ಅಥವಾ ಅಯೋಗ್ಯನೆಂದೋ, ತಮ್ಮ ಮನೆಯಲ್ಲಿ ನೋಟ್ ಎಣಿಸುವ ಯಂತ್ರ ಇಟ್ಟುಕೊಂಡಿದ್ದು ಶೇ. 40 ಕಳ್ಳತನಕ್ಕೋ ಅಥವಾ ಲೆಕ್ಕ ಬಾರದ ಅಯೋಗ್ಯತನಕ್ಕೋ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿಮ್ಮ ಪಕ್ಷ ನಿಮಗೆ ಟಿಕೆಟ್ ನಿರಾಕರಿಸಿ ಮನೆಯಲ್ಲಿ ಕೂರಿಸಿದ್ದು ಯೋಗ್ಯನೆಂದೋ, ಅಯೋಗ್ಯನೆಂದೋ? ದಶಕಗಳ ಕಾಲ ತಾವು ಮಣ್ಣು ಹೊತ್ತರೂ ನಿಮ್ಮನ್ನು ಸಿಎಂ ಮಾಡದೆ ನಿಮ್ಮ ಮುಂದೆ ಬೆಳೆದವರಿಗೆ ಮಣೆ ಹಾಕಿದ್ದು ತಾವು ಯೋಗ್ಯನೆಂದೋ, ಅಯೋಗ್ಯನೆಂದೋ ಎಂದು ತಿರುಗೇಟು ನೀಡಲಾಗಿದೆ.

 

Related