ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಿಂದ ಅಭಿನಂದನೆ

ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಿಂದ ಅಭಿನಂದನೆ

ಕೊಪ್ಪಳ : ಜಿಲ್ಲಾಡಳಿತ ಹಾಗೂ ಜಿಪಂ ಜಿಲ್ಲಾ ಆರೋಗ್ಯ ಕುತುಂಬ, ಕಲ್ಯಾಣ ಇಲಾಖೆ ಕರ್ನಾಟಕ, ಏಡ್ಸ್ ಪ್ರಿವೆನ್ಷನ್ ಸೊಸೈಟಿ ಕೊಪ್ಪಳ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಕೊಪ್ಪಳ, ರೆಡ್ ರಿಬ್ಬನ್ ಕಾಲೇಜುಗಳು ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಡೆದಿದೆ.

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಮ್ಮ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಏನ್.ಎಸ್.ಎಸ್ ಘಟಕಾರ್ಥಿಗಳಾದ ಬಿಎಸ್ಸಿ ಐದನೇ ಸೆಮಿಸ್ಟರಿನ ಕಾವ್ಯ ಎ ಹಾಗೂ ಬಿಎಸ್ಸಿ ಮೂರನೇ ಸೆಮಿಸ್ಟರಿನ ಭೂಮಿಕಾ ಅಂಗಡಿ ಭಾಗವಹಿಸಿ ತೃತೀಯ ಸ್ಥಾನ ಪಡೆದಿದ್ದಕ್ಕಾಗಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಜೆ. ಎಸ್. ಪಾಟೀಲ್, ಏನ್.ಎಸ್.ಎಸ್ ಘಟಕಾಧಿಕಾರಿಗಳಾದ ರಾಜು ಹೊಸಮನಿ, ಡಾ.ನಾಗರಾಜ ದಂಡೋತಿ ಹಾಗೂ ಪ್ರಾಧ್ಯಾಪಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Related